ಶ್ರೀನಿವಾಸಪುರ: ಡಾ|ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಸಮಂಜರಿ ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟನೆ

ಶ್ರೀನಿವಾಸಪುರ: ಇಲ್ಲಿ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ರಾತ್ರಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟಿಸಿದರು.
ತುಮಕೂರು ಕಲಾವಿದರು ಹಾಗೂ ಜಿಜಿ ವೇಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಚಳಿಯನ್ನು ಲೆಕ್ಕಿಸದೆ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪುನೀತ್ ರಾಜ್ ಕುಮಾರ್ ಚಿತ್ರಗಳ ಹಾಡುಗಳು ಹಾಗೂ ಮಿಮಿಕ್ರಿ ಮೂಲಕ ಕಲಾವಿದರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಈ ಸಂದರ್ಭದಲ್ಲಿ ಸಾಹಿತಿ, ಕವಿ, ಕಲಾವಿದರು ಹಾಗೂ ಗಣ್ಯ ವ್ಯಕ್ತಿಳನ್ನು ಸನ್ಮಾನಿಸಿ, ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಮುಖಂಡರಾದ ಎಂ.ಎಲ್.ಸತೀಶ್, ಎಂ.ಮುನಿರೆಡ್ಡಿ, ಡಾ. ಜಿ.ಎಸ್.ಶ್ರೀನಿವಾಸ್, ಡಾ. ಉಮಾಶಂಕರ್, ಬಳಗದ ಪಧಾಧಿಕಾರಿಗಳಾದ ಎಸ್.ವಿ.ಚಂದ್ರಶೇಖರ್, ಶ್ರವಣ್, ಪಿ.ಶ್ರೀನಿವಾಸಲು, ಡಿ.ಎಸ್.ಕಾರ್ತಿಕರ್, ಎನ್.ಮುನಿರಾಜು, ವಿ.ಮಂಜುನಾಥ್, ಎಸ್.ವೇದಾಂತ್, ಎಸ್.ಬಾಬು, ಮದನ್ ಮೋಹನ್, ನಾರಾಯನಮೂರ್ತಿ, ಯಾಹ್ಯಾಖಾನ್, ಶ್ರೀನಿವಾಸ, ಹೈದರವಲ್ಲಿ, ಹರೀಶ್, ಕೆ.ರಾಮಣ್ಣ, ಜಿ.ಆರ್.ರೆಡ್ಡಪ್ಪ, ಬಿ.ಎಂ.ಪ್ರವೀಣ್ ಕುಮಾರ್, ಎಸ್.ವಿ.ಕಾರ್ತಿಕ್ ಇದ್ದರು.