ತಲ್ಲೂರಿನ ಇಗರ್ಜಿ ಸಭಾಂಗಣದಲ್ಲಿ ಉಚಿತ ನೇತ್ರ ಹಾಗೂ ಚರ್ಮರೋಗ ತಪಾಸಣಾ ಶಿಬಿರ

ಉಚಿತ ನೇತ್ರ ಹಾಗೂ ಚರ್ಮರೋಗ ತಪಾಸಣಾ ಶಿಬಿರವು ತಲ್ಲೂರಿನ ಇಗರ್ಜಿ ಸಭಾಂಗಣದಲ್ಲಿ ರೋಟರಿ ಕುಂದಾಪುರ ದಕ್ಷಿಣ, ರೋಟರಿ ಸಮುದಾಯ ದಳ ತಲ್ಲೂರು, ಕ್ರೈಸ್ತ ಸ್ತ್ರೀ ಸಂಘ ತಲ್ಲೂರು, ಗ್ರಾಮ ಪಂಚಾಯಿತಿ ತಲ್ಲೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗ್ಗೊಳ್ಳಿ ಇವರ ಸಹಭಾಗಿತ್ವದಲ್ಲಿ ಜರುಗಿತು. ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು.ಕೆ ಎಮ್ ಸಿ ಮಣಿಪಾಲದ ವೈದ್ಯರು ಆಗಮಿಸಿ 350ಕ್ಕೂ ಅಧಿಕ ನಾಗರಿಕರನ್ನು ತಪಾಸಣೆ ಮಾಡಿ ಚಿಕಿತ್ಸೆ ಹಾಗೂ ಸಲಹೆ ನೀಡಿದರು.