ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ: ಸಚಿವೆ ನಿರ್ಮಲಾ ಸೀತಾರಾಮನ್

ಕೋಲಾರ : ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ , ಅಧಿಕಾರಿಗಳು ಕೆರೆ ಕಾಮಗಾರಿಗಳ ಕುರಿತು ನಿರ್ಲಕ್ಷ್ಯ ತೊರದಿರಿ , ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು , ಕೆರೆಗೆ ನೀರು ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ , ಮುಂದಿನ ಕೆರೆಗಳಿಗೆ ಯಾವ ರೀತಿ ನೀರು ಹರಿದು ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು . ಅಜಾದಿ ಕಾ ಅಮೃತ ಸರೋವರ ಯೋಜನೆ ಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸಿದ್ದ ಸಚಿವರು , ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಕೆರೆ , ಘಟ್ಟಕಾಮಧೇನುಹಳ್ಳಿ ಕೆರೆ , ಕೋಲಾರ ತಾಲ್ಲೂಕಿನ ಶೆಟ್ಟಿಕೊತ್ತನೂರು ಕೆರೆ ವೀಕ್ಷಿಸಿ , ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿರುವ ಕುರಿತು ತೃಪ್ತಿ ವ್ಯಕ್ತಪಡಿಸಿದರು . ಕೋಲಾರ ಜಿಲ್ಲೆಯಾದ್ಯಂತ ಅಜಾದಿ ಕಾ ಅಮೃತ ಸರೋವರ ಯೋಜನೆಯಡಿ 75 ಕೆರೆಗಳನ್ನ ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ , ಅನುಧಾನ ಬೇಕಾದರೆ ಮತ್ತಷ್ಟು ನೀಡುವೆ ಕಾಮಗಾರಿಗಳು ಸಮಪರ್ಕ ವಾಗಿ ಆಗಬೇಕು ಎಂದು ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿ ಮುಂದೆ ಬೇಸರ ವ್ಯಕ್ತಪಡಿಸಿದರು . ಕೆರೆ ಅಚ್ಚುಕಟ್ಟು ನಿರ್ವಹಣೆ , ಒತ್ತುವರಿ ಕುರಿತು ಬೇಸರ ವ್ಯಕ್ತಪಡಿಸಿದ ಅವರು , ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು , ಕೆರೆಗೆ ನೀರು ಹರಿದು ಬರಲು ರಸ್ತೆ ಮಾಡಬೇಕಾಗಿಲ್ಲ ಪ್ರಕೃತಿದತ್ತವಾಗಿರುವ ರಾಜಕಾಲುವೆಯ ಒತ್ತುವರಿ ತಡೆದು ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂದರು . ಒಂದು ಕಡೆ ಕೊಳಚೆ ನೀರು ಹರಿಯುತ್ತಿರು ವುದನ್ನು ಗಮನಿಸಿದ ಸಚಿವರು ನೀರು ಸಂಸ್ಕರಿಸಿ ಕೆರೆಗೆ ಹರಿಸಬೇಕು , ಕೆರೆಯ ಸುತ್ತಲಿನ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದರು . ನರೇಗಾದಡಿ ಜಾನುವಾರು ಶೆಡ್ ನಿರ್ಮಿಸಿ ಕೊಡುವಂತೆ ಹಾಗೂ ಕಿಸಾನ್ ಕಾರ್ಡ್ ವಿತರಿಸುವಂತೆಯೂ ಸಚಿವೆ ನಿರ್ಮಾಲಾ ಸೀತಾರಾಮನ್ ಅಧಿಕಾರಿಗಳಿಗೆ ಸೂಚಿಸಿದರು . ರಾಜ್ಯದಲ್ಲಿ 2375 ಕೆರೆಗಳ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾ ಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮಾಧ್ಯಮದ ಜತೆ ಮಾತನಾಡಿ , ರಾಜ್ಯಾದ್ಯಂತ 2,375 ಕೆರೆ ಅಭಿವೃದ್ಧಿ ಮಾಡಲಾ ಗುತ್ತಿದ್ದು , ಕೋಲಾರ ಜಿಲ್ಲೆಯಲ್ಲಿ ಒಟ್ಟು 75 ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ . ಕಾಮಗಾರಿ ತ್ವರಿತಗತಿಯಲ್ಲಿ ನಡೆ ಯುತ್ತಿದ್ದು , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೃಪ್ತಿ ವ್ಯಕ್ತಪಡಿಸಿದರು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಕೆಲವು ಕೆರೆಗಳ ಬೌಂಡರಿ ಸರಿಯಾಗಿ ಗುರುತಿಸಿಲ್ಲ ಕೆರೆಯ ಪಕ್ಕದಲ್ಲೇ ರೈತರ ಜಮೀನು ಇದೆ ಗಿಡಗಳನ್ನು ಕೆರೆಯೊಳಗೆ ನೆಡಲಾಗಿದೆ ಎಂಬ ಕೆಲ ತಪ್ಪುಗಳನ್ನು ಸಚಿವರು ಗುರುತಿಸಿದರು . ಒತ್ತುವರಿ ತೆರವುಗೊಳಿಸಿ ಕೆರೆಯ ಬೌಂಡರಿಯನ್ನು ಸರಿಯಾಗಿ ಗುರುತಿಸುವಂತೆ , ಹೂಳು ತೆಗೆಯುವಂತೆ ಸೂಚನೆ ನೀಡಿದ್ದಾರೆ ಎಂದರು . ಈ ಸಂದರ್ಭದಲ್ಲಿ ಸಂಸದ ಎಸ್.ಮುನಿ ಸ್ವಾಮಿ , ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ , ಮಾಜಿ ಸಚಿವ ವರ್ತೂರು ಪ್ರಕಾಶ್ , ಜಿಲ್ಲಾಧಿಕಾರಿ ವೆಂಕಟರಾಜಾ , ಎಸ್ಪಿ ಡಿ.ದೇವರಾಜ್ , ಜಿಪಂ ಸಿಇಒ ಯುಕೇಶ್‌ಕುಮಾರ್ , ಮಾಜಿ ಶಾಸಕರಾದ ಎಂ . ನಾರಾಯಣ ಸ್ವಾಮಿ , ಬಿ.ಪಿ. ವೆಂಕಟ ಮುನಿಯಪ್ಪ.ವೈ.ಸಂಪಂಗಿ , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮತ್ತಿತರರಿದ್ದರು .