ಗೋಕುಲ ಮಿತ್ರಬಳಗದಿಂದ ಕೆ.ಎಸ್.ಗಣೇಶ್ ಹುಟ್ಟುಹಬ್ಬ ಆಚರಣೆ: ಕಮಲಾ ಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಣೆ

ಕೋಲಾರ:- ಒಳ್ಳೆ ವ್ಯಕ್ತಿತ್ವ, ಗುಣ, ಸ್ವಂತ ಸಾಮಥ್ರ್ಯ ಹಾಗೂ ದುಡಿಮೆಯಿಂದ ಬೆಳವಣಿಗೆ ಕಂಡಿರುವ ಗಣೇಶ್ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ,ಉನ್ನತಿ ನೀಡಲಿ ಎಂದು ಗೋಕುಲ ಮಿತ್ರಬಳಗದ ಸದಸ್ಯರು ಹಾರೈಸಿದರು.
ನಗರದ ಕಮಲಾಮಹಡಿ ಶಾಲೆಯಲ್ಲಿ ಗೋಕುಲ ಮಿತ್ರ ಬಳಗ ಹಮ್ಮಿಕೊಂಡಿದ್ದ ಕೋಲಾರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅವರ ಹುಟ್ಟುಹಬ್ಬದ ಆಚರಣೆ ಹಿನ್ನಲೆಯಲ್ಲಿ ಕಮಲಾಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಿಸಿ ಬಳಗದ ಹಲವಾರು ಮುಖಂಡರು ಶುಭ ಕೋರಿದರು.
ಮುಖಂಡರಾದ ಕೆ.ಜಯದೇವ್,ಮುನಿವೆಂಕಟಯಾದವ್,ಶಾಲೆಯ ಮುಖ್ಯಶಿಕ್ಷಕ ರಾಮಪ್ಪ, ಶಿಕ್ಷಕ ಮುನಿರಾಜು, ಚಲಪತಿ,ಸೇವಾದಳ ಕಾರ್ಯದರ್ಶಿ ಸುಧಾಕರ್,ಪಿಡಿಒ ನಾಗರಾಜ್ ಮತ್ತಿತರರು ಮಾತನಾಡಿ, ಯಾವುದೇ ವ್ಯಕ್ತಿ ಆತ್ಮವಿಮರ್ಶೆ ಮೂಲಕ ಗಟ್ಟಿತನವನ್ನು ಕಾಪಾಡಿಕೊಂಡು ಇತರರಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ, ಅಂತಹವರ ಸಾಲಿನಲ್ಲಿ ಅತಿ ಹೆಚ್ಚು ಸ್ನೇಹಿತರನ್ನು ಹೊಂದಿರುವ ಗಣೇಶ್ ಒಬ್ಬರು ಎಂದು ತಿಳಿಸಿದರು.
ಪತ್ರಿಕಾರಂಗದಲ್ಲಿ ಇವರ ಛಾಪು ಅಜರಾಮರ, ಅವರು ವೃತ್ತಿಯಲ್ಲಿ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಂಡು ಹೋಗಬೇಕು. ತಂದೆ ತಾಯಿಯ ಆಶೀರ್ವಾದ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ತಾಜಾ ಉದಾಹರಣೆ ಇವರೇ ಎಂದು ಹೇಳಿದರು.
ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿ ಭಾರತ ಸೇವಾದಳ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ತಮ್ಮ ಮೇಲಿನ ಅಭಿಮಾನದ ಕುರಿತು ಧನ್ಯವಾದ ಸಲ್ಲಿಸಿ, ಈ ಸ್ನೇಹ ಹಾಗೆಯೇ ಮುಂದುವರೆಯಲಿ ಎಂದು ಆಶಿಸಿದರು.

ಕೋರ್ಟ್ ಆನಂದ್‍ಗೆ ಆತ್ಮೀಯ ಸನ್ಮಾನ


ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಕೋಟೆಯ ಸ್ನೇಹ ಜೀವಿ ಆನಂದ್ ಅವರನ್ನು ಗೋಕುಲ ಮಿತ್ರ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾಮಂಜುನಾಥ್, ಗೋಕುಲ ಮಿತ್ರ ಬಳಗ ಸದಸ್ಯರಾದ ಮಣಿ,ಜ್ಯೂಸ್ ನಾರಾಯನಸ್ವಾಮಿ, ಯಲ್ಲಪ್ಪ, ಮಲ್ಲಿಕಾ ಪ್ರಕಾಶ್,ಚಾನ್ ಪಾಷಾ, ಬಜರಂಗದಳ ಬಾಲಾಜಿ,ವೆಂಕಟೇಶ್‍ಬಾಬಾ, ಹಾರೋಹಳ್ಳಿ ದೇವುಡು ರವಿ, ಆಸೀಫ್, ಶಂಕರ್, ರಾಜು, ಸರ್ವೋದಯ, ಬುಜ್ಜಿ, ಗೋಪಾಲ್‍ಕೃಷ್ಣ, ಗಂಗಮ್ಮನಪಾಳ್ಯ ರಾಮಯ್ಯ, ವರದೇನಹಳ್ಳಿ ವೆಂಕಟೇಶ್, ಮಂಚನಬಲೆ ಶ್ರೀನಿವಾಸ್,ಕಿಲಾರಿಪೇಟೆ ಕೃಷ್ಣಮೂರ್ತಿ, ಕ್ಯಾಪ್ಟನ್ ಮಂಜು, ನಾನಿ,ಶಿಕ್ಷಕ ಶ್ರೀರಾಮ್,ಫಲ್ಗುಣ,ಸ್ವಾಮಿ,ಗಿರಿ,ವಿನಯ್,ದಿಲೀಪ್‍ಕುಮಾರ್,ಲೋಕೇಶ್,ಡೆಕೋರೇಷನ್ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.