ಜನರು ಕಲ್ಯಾಣ ಮಂಟಪ,ಸಮುದಾಯ ಭವನಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ : ಜನರು ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು . ತಾಲ್ಲೂಕಿನ ಕೋಟಬಲ್ಲಪ್ಪಲ್ಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೂ .೭೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೀತಾರಾಮ ಕಲ್ಯಾಣ ಮಂಟಪ , ರೂ .೧೮ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ , ರೂ .೮ ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು . ಸಮುದಾಯ ಭವನಗಳು ಜ್ಞಾನಾರ್ಜನೆಗೆ ಪೂರಕ ಕೇಂದ್ರಗಳಾಗಬೇಕು . ಗ್ರಾಮದ ಜನರು ಸೇರಿ ವ್ಯವಸಾಯ ಮತ್ತಿತರ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಬೇಕು . ಸಮುದಾಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು . ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ , ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ , ಕೊಂಡಸಂದ್ರ ಶಿವಾರೆಡ್ಡಿ , ಸುರೇಶ್ ಗೌಡ , ಸತ್ಯನಾರಾಯಣಶೆಟ್ಟಿ , ಸತ್ಯಣ್ಣ , ರಾಮಕೃಷ್ಣಗೌಡ , ವೆಂಕಟರವಣ , ಜಯಪದ , ಶಾಂತಮ್ಮ , ಹಿಮಕರ್‌ , ವಿ.ವಾಸುದೇವ ಇದ್ದರು