IMA ಕುಂದಾಪುರ ದ ಆಶ್ರಯದಲ್ಲಿ KMC ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಭಾರತೀಯ ವೈದ್ಯಕೀಯ ಸಂಘ ( IMA) ಕುಂದಾಪುರ ದ ಆಶ್ರಯದಲ್ಲಿ KMC ಮಣಿಪಾಲ್ ಅವರ ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ದಿನಾಂಕ 3.9.22 ರಂದು ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದಲ್ಲಿ ನೆರವೇರಿತು.

 ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ KMC ಯ neurosurgery ವಿಭಾಗ ದ ಮುಖ್ಯಸ್ಥ Dr ಗಿರೀಶ್ ಮೆನನ್ ರು ” ಪಕ್ಷವಾತ ದಲ್ಲಿ ಶಸ್ತ್ರ ಚಿಕಿತ್ಸೆಯ ಪಾತ್ರ ” ದ ಬಗ್ಗೆ ಹಾಗೂ ಎಲುಬು ಕೀಲು ವಿಭಾಗ ದ Dr ಕೃಷ್ಣಪ್ರಸಾದ ರು ” ಹಿಮ್ಮಡಿ ನೋವಿನ ಉಪಶಮನ” ದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು . ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ದ ಅಧ್ಯಕ್ಷ ಎಲುಬು ಕೀಲು ಶಸ್ತ್ರ ಚಿಕಿತ್ಸಾ ತಜ್ನ Dr ಸಂದೀಪ ನಾವಡ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು .ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು ಕಾರ್ಯದರ್ಶಿ ಮಾನಸಿಕ ತಜ್ಞ Dr ರವೀಂದ್ರ ಮುನೊಳಿ ವಂದಿಸಿದರು