ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಅನಾರೋಗ್ಯ ಪೀಡಿತರಿಗೆ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕ ಈ ದಿನ ಹಳ್ಳಿಹೊಳೆಯ ತಲೆಸ್ಸೀಮಿಯ ದಿಂದ ಬಳಲುತ್ತಿರುವ ಪ್ರೀತಿಕಾ ಎನ್ನುವ ಬಾಲಕಿಯ ಶಸ್ತ್ರ ಚಿಕಿತ್ಸೆಗೆ ರೂಪಾಯಿ 25,000/- ದೇಣಿಗೆ ನೀಡಿದರು. ಈ ದೇಣಿಗೆ ಯನ್ನು ಸಭಾಪತಿ ಎಸ್. ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಅಬ್ದುಲ್ ಬಶೀರ್, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು. ಈ ದೇಣಿಗೆಯನ್ನು ನೀಡಿದ ಎಲ್ಲಾ ಸದಸ್ಯ ರಿಗೆ ಸಭಾಪತಿ ಯವರು ದನ್ಯವಾದ ತಿಳಿಸಿದರು.

ಎರಡನೇಯ ಕಾರ್ಯಕ್ರಮ:- ಪಾರ್ಶ್ವ ವಾತ ದಿಂದ ಬಳಲುತ್ತಿರುವ ಗೋಪಾಲ ನಾಯಕ್ ಇವರಿಗೆ ರೂಪಾಯಿ ಆರು ಸಾವಿರ ದೇಣಿಗೆ ನೀಡಲಾಯಿತು. ಗೋಪಾಲ ನಾಯಕ್ ಇವರ ಇಬ್ಬರು ಮಕ್ಕಳು ಕೂಡಾ ವಿಶೇಷ ಚೇತನರು. ಈ ದೇಣಿಗೆಯನ್ನು ಸಭಾಪತಿ ಎಸ್ ಜಯಕರ ಶೆಟ್ಟಿ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.