ಕುಂದಾಪುರ ಕಥೋಲಿಕ್ ಸಭಾ ಘಟಕದ ವತಿಯಿಂದ ನೇತಾರರಿಗೆ ಸಮ್ಮಾನ

ವರದಿ: ಮಝರ್, ಕುಂದಾಪುರ,                          (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಕುಂದಾಪುರ : ಕಥೋಲಿಕ್ ಸಭಾ ಕುಂದಾಪುರ ಘಟಕ ಹಾಗೂ ರೋಜರಿ ಚರ್ಚ್ ನಾಗರಿಕ ಆಯೋಗದ ಜಂಟಿ ಆಶ್ರಯದಲ್ಲಿ ಕ್ರೈಸ್ತ ಜನ ಪ್ರತಿನಿಧಿಗಳಾಗಿ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಹೋಲಿ ರೋಜರಿ ಇಗರ್ಜಿಯಲ್ಲಿ ಸಮ್ಮಾನಿಸಲಾಯಿತು.
ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷ, ಮಾಜಿ ಕುಂದಾಪುರ ನಗರಾಭಿವ್ರದ್ದಿ ಅಧ್ಯಕ್ಷ ಜಾಕೋಬ್ ಡಿಸೋಜ,ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ವಿನಯ ಪಾಯ್ಸ್, ಮತ್ತು ಲೀಡಿಯಾ ಅಲ್ಮೇಡಾ ಅವರನ್ನು ಕುಂದಾಪುರ ವಲಯ ಧರ್ಮಗುರು ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಮ್ಮಾನಿಸಿದರು. ಕುಂದಾಪುರ ಘಟಕದ್ ಕಥೋಲಿಕ್ ಸಭಾ ಅಧ್ಯಕ್ಷೆ ಶೈಲಾ ಅಲ್ಮೇಡಾ, ಕಾರ್ಯದರ್ಶಿ ಅಲ್ಡ್ರಿನ್ ಡಿಸೋಜಾ. ಕಾರ್ಯಕ್ರಮದ ಸಂಚಾಲಕ ವಾಲ್ಟರ್ ಡಿಸೋಜಾ ಹಾಗೂ ಇನ್ನಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.