ಮದುವೆಯಾದರೂ ಮನೆಯವರ ನಿರಾಕರಣೆ ಪ್ರೇಮಿಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

ವರದಿ : ಮಝರ್, ಕುಂದಾಪುರ

ಕುಂದಾಪುರ : ಬ್ರಹ್ಮಾವರದಲ್ಲಿ ಬೆಂಗಳೂರು ಮೂಲದ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಮದುವೆಗೆ ಮನೆಯವರು ನಿರಾಕರಿಸಿದ್ದರಿಂದ ಮನೆಗಳಿಂದ ಓಡಿ ಬಂದ ಜೋಡಿ ವಿವಶರಾಗಿ ಸಾವಿನ ಕದವನ್ನು ಭೀಕರವಾಗಿ ತಟ್ಟಿದ್ದಾರೆನ್ನಲಾಗಿದೆ.


ಬೆಂಗಳೂರಿನ ಹೆಬ್ಬಾಳದ ಯಶವಂತ್ ಯಾದವ್ (23) ಮತ್ತು ಜ್ಯೋತಿ (23) ಒಬ್ಬರನ್ನೊಬ್ಬರು ಸತ್ತು ಹೋಗುವಷ್ಟು ಪ್ರೀತಿಸುತಲಿದ್ದು ಇಬ್ವರ ಮನೆಯಲ್ಲೂ ಇವರ ಪ್ರೀತಿಗೆ ವಿರೋಧವಿತ್ತೆನ್ನಲಾಗಿದೆ
ಕೊನೆಗೂ ಓಡಿ ಹೋಗಿ ಮದುವೆಯಾಗುವ ನಿರ್ಧಾರಕ್ಕೆ ಬಂದ ಜೋಡಿ ಎರಡು ದಿನಗಳ ಹಿಂದೆ ಬೈಕ್ ನಲ್ಲಿ ಬೆಂಗಳೂರಿಗೆ ವಿದಾಯ ಕೋರಿ ಮಂಗಳೂರನ್ನು ತಲುಪಿದೆ.


ಮೊನ್ನೆ ಶನಿವಾರ ಮಂಗಳೂರಿನ ದೇವಸ್ಥಾನ ವೊಂದರಲ್ಲಿ ಮದುವೆ ಮಾಡಿಕೊಂಡ ನಂತರ ನವದಂಪತಿಗಳು ಮನೆಗೆ ಕರೆ ಮಾಡಿದ್ದಾರೆ. ತಾವು ಮದುವೆಯಾಗುವ ಫೋಟೋಗಳನ್ನು ಅತ್ಯಾಸೆಯಿಂದ ಸಾಮಾಜಿಕ ತಾಣಗಳ ಮೂಲಕ ಮನೆಯವರಿಗೆ ರವಾನಿಸಿ ಈಗಲಾದರೂ ಒಪ್ಪಬಹುದೆಂದು ಸಾವಿರ ದೇವರುಗಳ ಹರಕೆ ಹೊತ್ತು ಆತಂಕ ಕಳವಳಗಳಿಂದ ಕಾದಿದ್ದಾರೆ. ಆದರೆ, ಮನೆಯವರ ಸ್ಪಷ್ಟ ನಿರಾಕರಣೆ ಮತ್ತು ಬೆದರಿಕೆಗೆ ಒಳಗಾದ ಹಿನ್ನೆಲೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಎರಡು ಹೃದಯಗಳು ಕೊನೆಗೂ ಕ್ರೂರ ದುಷ್ಟ ನಿರ್ಧಾರಕ್ಕೆ ಬಂದಿದ್ದಾರೆ.ಮತ್ತದು ಆಚಲವಾಗಿತ್ತು.


ಮಂಗಳೂರಿನಿಂದ ಸೆಲ್ಫ್ ಡ್ರೈವ್ ಕಾರ್ ಪಡೆದ ಜೋಡಿ ಬಾಟಲ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಕಾರಿನಲ್ಲಿ ಭದ್ರವಾಗಿರಿಸಿಕೊಂಡಿದೆ.


ಮಧ್ಯ ರಾತ್ರಿವರೆಗೂ ಸುತ್ತಾಡಿ ಬಳಿಕ ತಡ ರಾತ್ರಿ 2 ಗಂಟೆ ಸುಮಾರಿಗೆ ಕಟ್ಟಕಡೆಯ ಬಾರಿಯೋ ಎಂಬಂತೆ ಕುಟುಂಬಸ್ಥರಿಗೆ ಮೆಸೇಜ್ ಮಾಡಿದ್ದಾರೆ.ಈ ಜನುಮದಲ್ಲಿ


ನಾವು ಬೇರೆಯಾಗಿ ಬದುಕುವುದು ಊಹಿಸಲೂ ಸಾಧ್ಯವಿಲ್ಲ ನಮ್ಮನ್ನು ಬೇರೆ ಮಾಡಲು ಸಾಧ್ಯವೆಂಬುದಾದರೆ ಅದು ಸಾವಿನಿಂದ ಮಾತ್ರ.


ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ನಮ್ಮನ್ನ ಕ್ಷಮಿಸಿಬಿಡಿ ಎಂದು ಮೆಸೇಜ್ ರವಾನಿಸಿದ್ದಾರೆ.


ಇಷ್ಟಾಗುವಾಗ ಕಾರು ಮಂದಾರ್ತಿ ಸರಹದ್ದನ್ನು ತಲುಪಿದೆ.
ಮೆಸೇಜ್ ನಂತರ ಕುಟುಂಬಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳದಿಂದ ಲೋಕೇಶನ್ ಕೂಡಾ ಶೇರ್ ಮಾಡಿದ್ದಾರೆ. ನಂತರ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ತೀರ ತಲುಪದ ತಮ್ಮ ವಿಫಲ ಪ್ರೇಮಕ್ಕೆ ಇನ್ನಿಲ್ಲದ ಕ್ರೂರ,ವಿಕಾರ ಸಾಕ್ಷಿಯನ್ನಿರಿಸಿ ಮತ್ತೆ ಬಾರದ ಲೋಕಕ್ಕೆ ಜತೆಯಾಗಿಯೇ ತೆರಳಿದ್ದಾರೆ.


ಘಟನೆ ಸಂಬಂಧ ಕಾರಿನ ನಂಬರ್ ಪಡೆದು ಪರಿಶೀಲನೆ ನಡೆಸಿದ ಬ್ರಹ್ಮಾವರ ಪೊಲೀಸರು, ಬಾಡಿಗೆ ಪಡೆದಿರುವುದು ಮಾಹಿತಿ ಲಭ್ಯವಾಗಿದೆ. ಬಾಡಿಗೆ ಕಾರು ಪಡೆಯುವಾಗ ಪ್ರೇಮಿಗಳು ನೀಡಿದ್ದ ದಾಖಲೆಗಳ ಆಧಾರದ ಮೇಲೆ ಬೆಂಗಳೂರು, ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.