ಪತ್ರಕರ್ತ ವಿ.ಮುನಿರಾಜು ನಿವಾಸಕ್ಕೆ ನಟ ನಿಖಿಲ್‍ಕುಮಾರ್ ಸ್ವಾಮಿ ಭೇಟಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ನಗರದ ಬೈರೇಗೌಡ ಬಡಾವಣೆಯಲ್ಲಿನ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ವಿ. ಮುನಿರಾಜು ಅವರ ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಇತ್ತೀಚೆಗೆ ತಾನೇ ನಡೆದ ಮುನಿರಾಜು ಅವರ ಪುತ್ರ ಡಾ.ವಿ.ಎಂ.ಸೃಜನ್-ಡಾ.ಎಸ್.ಸುಶ್ಮಿತಾ ಅವರ ಮದುವೆಗೆ ಬರಲಾಗದ ಕಾರಣ ಇಂದು ನಿವಾಸಕ್ಕೆ ಆಗಮಿಸಿ ನೂತನ ವಧುವರರಿಗೆ ನಿಖಿಲ್ ಶುಭ ಕೋರಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಂವೃದ್ಧಿ ಮಂಜುನಾಥ್, ಕರ್ನಾಟಕ ಪ್ರಜಾ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ. ಮುನಿರಾಜು ಅವರ ಕುಟುಂಬಸ್ಥರು ಇತರರು ಇದ್ದರು.