ಶ್ರೀನಿವಾಸಪುರ ಏ.21 ರಂದು ಶ್ರೀನಿವಾಸಪುರ 66\11 ಕೆವಿ ಉಪ ಕೇಂದ್ರದ ಎಫ್.13 ಕಿರುವಾರ ಮಾರ್ಗದ ಬ್ರೇಕರ್ ದುರಸ್ತಿ ಕಾಮಗಾರಿಗೆ ಕೆಲವಡೆ ವಿದ್ಯುತ್ ನಿಲುಗಡೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಏ.21 ರಂದು ಶ್ರೀನಿವಾಸಪುರ 66\11 ಕೆವಿ ಉಪ ಕೇಂದ್ರದ ಎಫ್.13 ಕಿರುವಾರ ಮಾರ್ಗದ ಬ್ರೇಕರ್ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಆ ಮಾರ್ಗಕ್ಕೆ ಅಡ್ಡಲಾಗಿ ಚಲಿಸುವ ನಂಬಿಹಳ್ಳಿ, ಆಲವಟ್ಟ, ನಾರಮಾಕಲಹಳ್ಳಿ, ಶ್ರೀನಿವಾಸಪುರ, ಎಪಿಎಂಸಿ ಮಾರ್ಗಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ವಿದ್ಯುತ್ ಕಡಿತವಾಗಿರುತ್ತದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.