ಕೋಲಾರ ತಾಲ್ಲೂಕಿನ ವಕ್ಕಲೇರಿಯಲ್ಲಿ ಸೀತಾರಾಮ ಕಲ್ಯಾಣೋತ್ಸವ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ತಾಲ್ಲೂಕಿನ ವಕ್ಕಲೇರಿಯಲ್ಲಿ ಶ್ರೀರಾಮನವಮಿ ಅಂಗವಾಗಿ ಸೀತಾರಾಮ ಕಲ್ಯಾಣೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಗಳಿಂದ ನೇರವೇರಿತು.
ಉತ್ಸವದಲ್ಲಿ ಪಾಲ್ಗೊಂಡಿದ್ದ ಮುಖಂಡ ವಕ್ಕಲೇರಿ ರಾಮು, ಗಾಂಧೀಜಿಯವರು ಭಾರತ ರಾಮರಾಜ್ಯವಾಗಬೇಕು ಎಂದು ನಂಬಿದ್ದರು ಅಂದರೆ ರಾಮನ ಆಡಳಿತ ಎಷ್ಟು ಜನಪರವಾಗಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ ಎಂದರು.
ಜನತೆ ಎಷ್ಟೇ ಸಮಸ್ಯೆಗಳಿಂದ್ದರೂ ತಮ್ಮ ಸಂಪ್ರದಾಯ ಹಾಗೂ ಭಕ್ತಿ,ಶ್ರದ್ಧೆಯಿಂದ ವಿಮುಖರಾಗದೇ ರಾಮೋತ್ಸವ ಆಚರಿಸುತ್ತಿದ್ದು, ಎಲ್ಲರಿಗೂ ಅವರು ಶುಭಾಷಯ ಕೋರಿದರು.
ಪೂಜಾ ಕಾರ್ಯಗಳ ನೇತೃತ್ವವನ್ನು ಅರ್ಚಕರಾದ ಸುಬ್ಬಣ್ಣಸ್ವಾಮಿ, ರಾಜು, ಮುರಳಿ ವಹಿಸಿಕೊಂಡಿದ್ದು, ಮುಖಂಡ ವಕ್ಕಲೇರಿ ರಾಮು, ಟೈಲರ್ ಮುನಿಯಪ್ಪ, ಯಶೋಧಮ್ಮ, ತಾಪಂ ಮಾಜಿ ಸದಸ್ಯೆ ವಿಜಯಲಕ್ಷ್ಮಿ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.