ಧರ್ಮರಾಯಸ್ವಾಮಿ ದೇವಾಲಯಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್‍ರಿಂದ 5 ಲಕ್ಷ ದೇಣಿಗೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಏ.9: ತಾಲೂಕಿನ ವೇಮಗಲ್ ನಲ್ಲಿ ನೆಲೆಸಿರುವ ಶ್ರೀ ಧರ್ಮರಾಯಸ್ವಾಮಿ ದ್ರೌಪತಿ ದೇವಿಯವರ ಕಲ್ಯಾಣ ಮಂಟಪ ಅಭಿವದ್ಧಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಶನಿವಾರ 5 ಲಕ್ಷ ರೂಪಾಯಿಗಳ ದೇಣಿಗೆ ನೀಡಿದರು.
ದೇವಾಲಯ ನಿರ್ಮಾಣಕ್ಕೆ ಇದುವರೆವಿಗೂ 70 ಲಕ್ಷ ನೀಡಲಾಗಿತ್ತು. ಶನಿವಾರ ಸುಮಾರು 5 ಲಕ್ಷ ರೂಪಾಯಿಗಳನ್ನು ಸಚಿವ ವರ್ತೂರು ಪ್ರಕಾಶ್ ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರುಗಳಿಗೆ ನೀಡಿ ದೇವಾಲಯ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕ್ಷೇತ್ರದ ಮುಖಂಡರು ಆದ ಬೆಗ್ಲಿ ಪ್ರಕಾಶ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸಿ.ಎಸ್ ವೆಂಕಟೇಶ್ ಮತ್ತು ಬಂಕ್ ಮಂಜುಣ್ಣ ಹಾಗೂ ಅರುಣ್ ಪ್ರಸಾದ್ ಮತ್ತು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೋಲಾರ ತಾಲೂಕಿನ ವೇಮಗಲ್ ನಲ್ಲಿ ನೆಲೆಸಿರುವ ಶ್ರೀ ಧರ್ಮರಾಯಸ್ವಾಮಿ ದ್ರೌಪತಿ ದೇವಿಯವರ ಕಲ್ಯಾಣ ಮಂಟಪ ಅಭಿವದ್ಧಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಶನಿವಾರ 5 ಲಕ್ಷ ರೂಪಾಯಿಗಳ ದೇಣಿಗೆ ನೀಡಿದರು.