ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯಿಂದ ಡಿಜಿಟಲ್ ಸದಸ್ಯತ್ವ ಅಭಿಯಾನ ಬ್ಲಾಕ್ ಕಾಂಗ್ರೆಸ್ ಕುಂದಾಪುರ.

JANANUDI.COM NETWORK

ನೂರಾರು ವರ್ಷಗಳ ಹೋರಾಟದಿಂದ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಇದು ಒಂದು ಆಂದೋಲನ ,ದೇಶದ ಜನರೇ ರೂಪಿಸಿದ ಸಂಘಟನೆ .ಭಾರತ ಪ್ರಜಾಪ್ರಭುತ್ವ ,ಸಂವಿಧಾನ ಉಳಿಸಲು, ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡಲು ಕಟಿಬದ್ಧವಾಗಿರುವ ಪಕ್ಷ.
ದೇಶ ಈಗ ಮತ್ತೊಮ್ಮೆ ಸಂಕಷ್ಟದಲ್ಲಿದೆ .ಬೆಲೆಯೇರಿಕೆ, ನಿರುದ್ಯೋಗ ,ಸರ್ವಾಧಿಕಾರ ,ಜನವಿರೋಧಿ ಧೋರಣೆಗಳಿಂದ ದೇಶದ ಜನತೆಗೆ ಮುಕ್ತಿ ಬೇಕಾಗಿದೆ .ಭಾರತವನ್ನು ಮತ್ತೆ ಅಭಿವೃದ್ಧಿ ಹಾದಿಗೆ ಮರಳಿಸಬೇಕಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆ ತರಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದೆ.

ಬ್ಲಾಕ್ ಕಾಂಗ್ರೆಸ್ ಕುಂದಾಪುರ ಡಿಜಿಟಲ್ ಸದಸ್ಯತ್ವದ ಅಭಿಯಾನವು ಈಗಾಗಲೇ ಪುರಸಭೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಎನ್ರೋಲರ್ ಮೂಲಕ ನಡೆಯುತ್ತಿದೆ. ಬೂತ್ ಹಂತದಲ್ಲಿ ಇಬ್ಬರು ನೊಂದಣಿ ಕಾರರು ಇದ್ದು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವವನ್ನು ಪಡೆಯುತ್ತಿದ್ದಾರೆ. ಪುರಸಭಾ ಸದಸ್ಯೆ ಶ್ರೀಮತಿ ಪ್ರಭಾವತಿ ಶೆಟ್ಟಿ ತಮ್ಮ ಬೂತ್ ನಲ್ಲಿ ನೂರಕ್ಕೂ ಹೆಚ್ಚು ಸದಸ್ಯರನ್ನು ಈಗಾಗಲೇ ನೊಂದಾಯಿಸಿ ಸದಸ್ಯತ್ವ ನೊಂದಣಿಯ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಲಾಡಿ ಜಿಲ್ಲಾ ಪಂಚಾಯತ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕೃಷ್ಣ ಪೂಜಾರಿ, ವಾಣಿ ಶೆಟ್ಟಿ ,ಕೋಟೇಶ್ವರದ ಜಿಲ್ಲಾ ಪಂಚಾಯತ್ ನಲ್ಲಿ ವಿನ್ಸಿಲ್ ಅಲ್ಮೇಡ್, ಜೋಸೆಫ್ ರೆಬೆಲ್ಲೊ ಬೂತ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ನೋಂದಾಯಿಸಿದ್ದಾರೆ.


ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲು ಆಸಕ್ತರಿರುವವರು ತಮ್ಮ ವೋಟರ್ ಐಡಿಯ ಮಾಹಿತಿಯನ್ನು ನೀಡಿ ಕಚೇರಿ ಸಿಬ್ಬಂದಿಯಿಂದ ಸದಸ್ಯತ್ವ ಪಡೆಯಬಹುದು, ಇಲ್ಲವಾದಲ್ಲಿ ಬೂತ್ ಎನ್ರೋಲರ್ ಮಾಹಿತಿಯನ್ನು ಪಡೆದು ತಮ್ಮ ಬೂತಲ್ಲಿ ಸದಸ್ಯತ್ವ ನೋಂದಾಯಿಸ ಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಮನವಿಯನ್ನು ಮಾಡಿಕೊಂಡಿದ್ದಾರೆ.


ಕಚೇರಿ ಸಮಯ ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ.
ಮೋಬೈಲ್ ಸಂಖ್ಯೆ. 9480591862

ನೋಂದಾವಣಿ ಗೆ ಕೊನೆಯ ದಿನಾಂಕ 31-3-2022