ರಾಯಲ್ಪಾಡ್,ಅಡ್ಡಗಲ್. ರೋಣೂರು,ಎಚ್ಚನ ಹಳ್ಳಿಯಲ್ಲಿ ಮಾ.12 ರಂದು ಪಹಣಿ, ಅಟ್ಲಾಸ್, ಪ್ರಮಾಣ ಪತ್ರ ಇತ್ಯಾದಿ ಉಚಿತವಾಗಿ ಮನೆ ಬಾಗಿಲಿಗೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ನಿವಾಸಪುರ: ತಾಲ್ಲೂಕಿನ ರಾಯಲ್ಪಾಡ್ ಹೋಬಳಿಯ ಅಡ್ಡಗಲ್ ಹಾಗೂ ರೋಣೂರು ಹೋಬಳಿಯ ಎಚ್ಚನಹಳ್ಳಿ ಗ್ರಾಮದಲ್ಲಿ ಮಾ.12 ರಂದು ಕಂದಾಯ ಇಲಾಖೆ ವತಿಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ತಹಶೀಲ್ದಾರ್ ಹಸ್ಸಮಾರಿಯಾ ತಿಳಿಸಿದ್ದಾರೆ.
ಎರಡೂ ಕಡೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಸೌಲಭ್ಯ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಯಾ ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.