ಭಾರತೀಯ ಜನೌಷಧ ಸಪ್ತಾಹ ವಿದ್ಯಾರ್ಥಿಗಳ ಸಾಥ್ : ಇಂದು ಭಂಡಾರ್ಕಾರ್ಸ್ ಕಾಲೇಜ್ನಲ್ಲಿ ಆಚರಣೆ

JANANUDII.COM NETWORK


ಕುಂದಾಪುರ, ಫೆ. 3: ಭಾರತೀಯ ಜನೌಷಧ ಸಪ್ತಾಹದ ಅಂಗವಾಗಿ ಮಾರ್ಚ್ ೨ ರಂದು ಭಂಡಾರ್ ಕರ್ಸ್ ಕಾಲೇಜ್ ನಲ್ಲಿ ಸುಮಾರು ಐನೂರು ಮಂದಿ ವಿದ್ಯಾರ್ಥಿಗಳಿಗೆಗಾಗಿ ಈ ಕಾರ್ಯವನ್ನು ಆಯೋಜಿಸ ಲಾಯಿತು.
ಕಾಲೇಜು ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ. ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. ಸೋನಿ ಜನ ಔಷಧಿ ಉತ್ಪನ್ನ ಗಳ ಕುರಿತು ಮಾಹಿತಿ ನೀಡಿದರು. ಇದರ ಗುಣಮಟ್ಟ ಮತ್ತು ಬೆಲೆಯ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಮತ್ತು ಕಾಲೇಜಿನ ಸ್ಟೂಡೆಂಟ್ಸ್ ವೆಲ್ ಫೇರ್ ಆಫೀಸರ್ ಆದ ಡಾ. ಶುಭಾಕರ್ ಆಚಾರ ಉಪಸ್ಥಿತ ರಿದ್ದರು.