ನಾಗೇಶ್ ಶ್ಯಾನುಭಾಗ್ ಕಿರಿಮಂಜೇಶ್ವರ ನಿಧನ

JANANUDI.COM NETWORK


ಕುಂದಪ್ರಭ ಪತ್ರಿಕಾ ಬಳಗದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ, ಕಿರಿಮಂಜೇಶ್ವರದ ನಾಗೇಶ ಶ್ಯಾನುಭಾಗ್ (57) ಇವರು ಫೆ. 11 ರಂದು ಹೃದಯಾಘಾತದಿಂದ ನಿಧನರಾದರು.
ಸರಳತೆ, ಸಜ್ಜನಿಕೆ ಹಾಗೂ ಉತ್ತಮ ಜನಸಂಪರ್ಕದಿಂದ ಎಲ್ಲರ ಪ್ರೀತಿ, ಗೌರವ ಗಳಿಸಿದ್ದ ಇವರು ಸಹಕಾರಿ ಸಂಸ್ಥೆಗಳು, ಸೇವಾ ಸಂಘಟನೆಗಳೊಡನೆ ಉತ್ತಮ ಒಡನಾಟ ಹೊಂದಿದ್ದರು.
ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಕುಂದಪ್ರಭ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.