ಕುಂದಾಪುರದ ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಗೆ 20 ವರ್ಷಗಳ ಸಂಭ್ರಮ – ನಿಮ್ಮ ಸೇವೆ ಪ್ರಶಂಸನೀಯ ಫಾ|ತಾವ್ರೊ

JANANUDI.COM NETWORK


ಕುಂದಾಪುರ, ಫೆ.11 : “ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಬ್ಯಾಂಕ್ ಕುಂದಾಪುರ ಶಾಖೆಯ ಸೇವೆ, ಪ್ರಶಂಸನೀಯ ಬ್ಯಾಂಕಿನ ಯಾವುದೇ ಕೆಲಸವನ್ನು ಗಮನವಿಟ್ಟು ಉತ್ತಮ ರೀತಿಯಿಂದ ಮಾಡುತ್ತೀರಿ, ಇತ್ತೀಚಿನ ದಿನಗಳಲ್ಲಿ ನಿಮ್ಮ ಬ್ಯಾಂಕು ಉತ್ತಮ ಸಾಧನೆ ಮಾಡುತ್ತಾ ಕುಂದಾಪುರದಲ್ಲಿ ಉತ್ತಮ ಹೆಸರು ಗಳಿಸಿದೆ. ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯಲಿ’ ಎಂದು ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂ|ಸ್ಟ್ಯಾನಿ ತಾವ್ರೊ ಆಶಿರ್ವದಿಸಿ ಸಂದೇಶ ನೀಡಿದರು.
ಅವರು ಕುಂದಾಪುರ ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಶಾಖೆಯ 20 ನೇ ವರ್ಷದ ಸಂಭ್ರಮಾಚರಣೆಯನ್ನು ಆಶಿರ್ವದಿಸಿ ಉದ್ಘಾಟಿಸಿ ‘ಮುಂದೆ 25 ವರ್ಷದ ಸಂಬ್ರಾಮಚರಣೆ ಇದ್ದು ಬ್ಯಾಂಕು ಧ್ವೀಗುಣ ಸಾಧಾನೆಯನ್ನು ಮಾಡಬೇಕು’ ಹರಸಿದರು.
ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅನಿಲ್ ಲೋಬೊ ಮಾತನಾಡಿ “ಮಂಗಳೂರಿನಲ್ಲಿ ಸ್ಥಾಪಿತವಾದ ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್‍ಗೆ 100 ವರ್ಷಗಳಿಕಿಂತಲೂ ಹೆಚ್ಚು ಇತಿಹಾಸವಿದ್ದು, ಉತ್ತಮ ಹೆಸರನ್ನು ಪಡೆದುಕೊಂಡಿದೆ, ಕುಂದಾಪುರದಲ್ಲಿ ಆರಂಭವಾಗಿ 20 ವರ್ಷ ಸಂದಿದೆ, ಈ ಸಂದರ್ಭದಲ್ಲಿ ಗ್ರಾಹಕರಿಗೆ ನಾವು ಉತ್ತಮ ಸೇವೆ ನೀಡಲು ಪ್ರಾಮುಖ್ಯತೆ ನೀಡಿದ್ದೆವೆ. ನಮ್ಮ ಬ್ಯಾಂಕು ರಾಷ್ಟ್ರಿಕ್ರತ ಬ್ಯಾಂಕುಗಳ ಸೇವೆಗಳಿಕಿಂತ ಕಡಿಮೆಯಿಲ್ಲ. ಎಲ್ಲಾ ರೀತಿಯ ಆಧುನಿಕತೆಯುಳ್ಳ ಸೌಲಭ್ಯಗಳನ್ನು ಬ್ಯಾಂಕು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸ್ವದೇಶ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಸಾಲ ನೀಡುತ್ತದೆ. ಸಿಬಂದಿಗಳು ಗ್ರಾಹಕರಿಗೆ ನಗುಮೊಗದ ಸೇವೆ ನೀಡಬೇಕು, ಗ್ರಾಹಕರೆ ನಮ್ಮ ದೊಡ್ಡ ಆಸ್ತಿ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನುಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿಜಯ ಪೂಜಾರಿ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ತೆರೆಜಾ ಶಾಂತಿ ಮುಂತಾದವರು ಮತ್ತು ಬ್ಯಾಂಕಿನ ಗ್ರಾಹಕರು ಉಪಸ್ಥಿರಿದ್ದರು. ಬ್ಯಾಂಕಿನ ನಿರ್ದೇಶಕ ಎಲ್ರೊಯ್ ಕಿರಣ್ ಕ್ರಾಸ್ಟೊ ಪ್ರಸ್ತಾವಿಸಿ ಸ್ವಾಗತಿಸಿದರು. ಬ್ಯಾಂಕಿನ ಪ್ರಬಂಧಕ ಸಂದೀಪ್ ಕ್ವಾಡ್ರರ್ಸ್ ವಂದಿಸಿದರು. ಜ್ಯೋತಿ ಬಾರೆಟ್ಟೊ ನಿರೂಪಿಸಿದರು.