ಜಿಲ್ಲೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು – ಡಿ.ದೇವರಾಜ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲೆಯಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳಾದ ಮಟ್ಕಾ ದಂದೆ , ಕ್ರಿಕೇಟ್ ಬೆಟ್ಟಿಂಗ್ , ಸಾಮಾಜಿಕ ಜಾಲತಾಣಗಳ ದುರ್ಬಳಕೆ , ಜೂಜೂಟ , ಗಾಂಜಾ , ಅಕ್ರಮ ಮರಳು ಸಾಗಾಣಿಕೆ , ಅಕ್ರಮ ಗಣಿಗಾರಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ ಅವರು ತಿಳಿಸಿದರು . ಇಂದು ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ , ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಬಗೆಹರಿಯದಿದ್ದರೆ . ತಾವುಗಳು ಧೈರ್ಯವಾಗಿ ನಮ್ಮ ಕಛೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು . ಜೂಜಿಗೆ ದಾಸರಾಗಿ ನಿಮ್ಮ ಮಕ್ಕಳ ವಿದ್ಯಾಭಾಸ್ಯಕ್ಕೆ ದಕ್ಕೆ ಉಂಟು ಮಾಡಬೇಡಿ . ಯಾವುದೇ ರೀತಿಯ ಪ್ರತಿಭಟನೆಗಳು , ಸಂಘಟನೆ ಮಾಡುವುದಾದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಪೊಲೀಸ್ ಅನುಮತಿಯನ್ನು ಪಡೆಯಬೇಕು . ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು . ಸಾಮಾಜಿಕ ಜಾಲತಾಣಗಳ ದುರ್ಬಳಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ವಾಟ್ಸ್ ಆಫ್ ಗುಂಪಿನಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಮಾನಹಾನಿ ಪೋಸ್ಟ್ ಮಾಡಿದರೆ ಗುಂಪಿನ ಆಡ್ಮಿನ್‌ಗಳನ್ನು ಹೊಣೆ ಮಾಡಲಾಗುತ್ತದೆ ಎಂದು ತಿಳಿಸಿದರು . ವಾಹನಗಳ ಮೇಲೆ ಯಾವುದೇ ಸಂಘಟನೆಯ ಹೆಸರು ಮುಂತಾದವುಗಳನ್ನು ಆರ್.ಟಿ.ಓ ನಿಂದ ಅನುಮತಿ ಇಲ್ಲದೆ ಬಳಸಿಕೊಳ್ಳುವಂತಿಲ್ಲ ಇದು ಕಾನೂನು ಬಾಹಿರ . ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಮಾಡುವ ಕುರಿತು ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ . ಮುಂದುವರಿದು ಅಕ್ರಮ ಮದ್ಯ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿ ಮಧ್ಯವನ್ನು ವಶಪಡಿಸಿಕೊಂಡು ಲೇಬಲ್ ಸಂಖ್ಯೆ ಆಧಾರದ ಮೇಲೆ ಸಂಬಂಧ ಪಟ್ಟ ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ಅಕ್ರಮ ಮರಳು ದಂದೆಯನ್ನು ನಿಲ್ಲಿಸಲಾಗುವುದು . ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಬಿಳಿ ಬಣ್ಣ ಹೊಡಿಸಲಾಗುವುದು . ಬಡ್ಡಿ ವ್ಯವಹಾರ ನಡೆಸುವವರು ಪರವಾನಿಗಿ ಹೊಂದಿದ್ದರೂ ಪರಿಶೀಲನೆ ನಡೆಸಿ ಅಕ್ರಮ ಬಡ್ಡಿ ವ್ಯವಹಾರವನ್ನು ತಡೆಯಲಾಗುತ್ತದೆ ಎಂದು ತಿಳಿಸಿದರು . ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಪೊಲೀಸ್ ಅಧಿಕಾರಿಗಳು ಸ್ಪಂದಿಸದಿದ್ದರೆ ನನ್ನ ದೂರವಾಣಿ ಸಂಖ್ಯೆ 9480802601 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಚಿನ್ ಘೋರ್ಪಡೆ ಅವರು ಉಪಸ್ಥಿತರಿದ್ದರು .