ಯುವ ಲೇಖಕಿ ಮುದ್ದು ತೀರ್ಥಹಳ್ಳಿ –ಇವರಿಗೆ ದೆ. ಜೋಸೆಪ್ ಆನಿ ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಾಸ್ಕಾರ – 2021

JANANUDI.COM NETWORK


ಕಲ್ಯಾಣಪುರ, ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ, ಕಥೊಲಿಕ್ ಸಭ-ಉಡ್ಪಿ ಪ್ರದೇಶ-ಇವರ ಸಹಬಗಿತ್ವದಲ್ಲಿ ನೀಡುವ ದಿವಂಗತ ಜೋಸೆಪ್ ಆನಿ ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯಾ ಪುರಾಸ್ಕಾರ-2021- ಮುದ್ದು ತೀರ್ಥಹಳ್ಳಿ, ಹೆಸರಿನಲ್ಲಿ ಬರೆಯುವ ವಿತಾಶಾ ರಿಯಾ ರೊಡ್ರಿಗೆಸ್ ಇವರಿಗೆ ನೀಡಲಾಗಿದೆ. ಕಳೆದ 7 ವರ್ಷಗಳಿಂದ ಕೊಂಕಣಿ ಹಾಗೂ ಕನ್ನಡ ಪತ್ರಿಕೆಗಳಲ್ಲಿ, ಇವರ ಕಥೆಗಳು, ಕವನಗಳು ಲೇಖನಗಳು ಪ್ರಗಟಗೊಂಡಿವೆ. ಇವರ 6 ಪುಸ್ತಕಗಳು ಪ್ರಗಟವಾಗಿದ್ದು, ಕಾಡ ಹಾದಿಯ ಹೂಗಳು ಚಲನಚಿತ್ರವಾಗಿದೆ.
ಪುರಸ್ಕಾರವನ್ನು, 5-12-2021 ರಂದು, ಕಲ್ಯಾಣಪುರದ ಮಿಲಾಗ್ರಿಸ್ ಕೊಲೇಜಿನಲ್ಲಿ ಕಥೊಲಿಕ್ ಸಭಾ ಹಾಗೂ ಆಮ್ಚೊ ಸಂದೇಶ್ ಮಾಸಿಕ ಆಯೋಜಿಸಿದ, ಲೇಖಕರ ಸಮಾವೇಶದಲ್ಲಿ ನೀಡಲಾಗುವುದು ಎಂದು ಪುರಸ್ಕಾರ ಸಮಿತಿಯ ಸಂಯೋಜಕರಾದ ಡಾ|ಜೆರಾಲ್ಡ್ ಪಿಂಟೊ ತಿಳಿಸಿದ್ದಾರೆ
.