ಡಾ.ರಾಜ್ ಸಂಘಟನೆಯ ವತಿಯಿಂದ ರಾಜ್ಯೋತ್ಸವ

ವರದಿ : ಮಝರ್, ಕುಂದಾಪುರ

ಕುಂದಾಪುರ : ಸ್ಥಳೀಯ ಕನ್ನಡಾಭಿಮಾನಿ ಡಾ. ರಾಜ್ ಕುಮಾರ್ ಸಂಘಟನೆಯ ವತಿಯಿಂದ ಹೊಸ ಬಸ್ಸು ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಜರಗಿದ ಈ ಕಾರ್ಯಕ್ರಮವನ್ನು ಟ್ರಾವೆಲ್ಸ್ ಉದ್ಯಮಿ ಸತೀಶ್ ಹೊಳ್ಳ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಸುಮಂತ್ ಟ್ರಾವೆಲ್ಸ್ ನ ಮುಕುಂದ ಭಟ್ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು.ಡಾ ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಅತಿಥಿಗಳನ್ನು ಬರ ಮಾಡಿಕೊಂಡರು.  ಈ ಸಂದರ್ಭದಲ್ಲಿ ಸಂಘಟನೆಯ ಸುನಿಲ್ ಖಾರ್ವಿ ತಲ್ಲೂರು,ಸಚಿನ್ ಖಾರ್ವಿ, ಅಗಸ್ಟಿನ್ ಡಿ.ಸೋಜ, ಕಿಶನ್ ಖಾರ್ವಿ, ನವೀನ್ ಕುಮಾರ್ , ಡುಂಡಿರಾಜ್, ಶಾಮಿಯಾನ ಪ್ರಭಾಕರ್ ಖಾರ್ವಿ, ವಿಘು ಖಾರ್ವಿ,ಶ್ರೀಧರ ಗಾಣಿಗ  ಮುಂತಾದವರು ಉಪಸ್ಥಿತರಿದ್ದರು. ಕೊಡಿ ಪ್ರಶಾಂತ್ ಗಾಣಿಗ ಕಾರ್ಯಕ್ರಮವನ್ನು ನಿರೂಪಿಸಿದರು.