ಮರವಂತೆ: ತಲ್ವಾರ್ ಗಳಿಂದ ಹೊಡೆದಾಡಿಕೊಂಡ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಬೈಂದೂರು, ಸೆ. 30:ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಕೆಲ ದಿನಗಳ ಹಿಂದೆ ಯುವಕರ ತಂಡ ತಲ್ವಾರ್ ನಿಂದ ಹೊಡೆದಾಟ ನಡೆದಿದ್ದು. ತಕ್ಷಣ 112 ಪೋಲಿಸ್ ದಸ್ತುಗಿರಿ ತಿರುಗುತ್ತಿದ್ದ ಸಂದರ್ಭ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ಇಂದು ಗಂಗೊಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು,

ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಗಾಟ ನಡೆಸುತ್ತಿದ್ದಾರೆ.112 ಪೋಲಿಸ್ ಜೀಪ್ ಚಾಲಕ ರಾಜೇಶ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಯವರ ಸಮಯಪ್ರಜ್ಞೆ ಮತ್ತು ಅತಿ ಸೂಕ್ಷ್ಮತೆಯಿಂದ ಗದಗ ಮೂಲದ ಇಬ್ಬರು ಆರೋಪಿಗಳು 2ದ್ವಿಚಕ್ರ ವಾಹನ ವಶಕ್ಕೆ ಪಡೆದು ಇನ್ನೂ 3ಆರೋಪಿಗಳ ಹುಡುಗಾಟದ ಶೋಧ ಕಾರ್ಯಾಚರಣೆ ನಡೆದಿದ್ದು ಕೇಸು ದಾಖಲಿಸಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಜೀಪ್ ಚಾಲಕ ರಾಜೇಶ್ .ಪೋಲಿಸ್ ಸಿಬ್ಬಂದಿ ಗಿರೀಶ್ ಹಾಗೂ ಠಾಣಾ ಸಿಬ್ಬಂದಿಗಳಿಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ.