ಶ್ರೀನಿವಾಸಪುರ, ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ದೇವತೆ ನರಡಮ್ಮದೇವಿ ವಿಗ್ರಹದ ಮೆರವಣಿಗೆ ವಿಜೃಂಭಣೆಯಾಗಿ ನಡೆಯಿತು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ದೇವತೆ ನರಡಮ್ಮದೇವಿ ವಿಗ್ರಹದ ಮೆರವಣಿಗೆ ಮೂರು ದಿನಗಳ ಕಾಲ ವಿಜೃಂಭಣೆಯಾಗಿ ನಡೆಯಿತು
ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಗಟ್ಟಿಹಳ್ಳಿ ನರಡಮ್ಮ ದೇವರ ಮೆರವಣಿಗೆ ಅತ್ಯಂತ ವೈಭವವಾಗಿ ನಡೆಯಿತು ದೇವಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾಧಿಗಳು ದೇವಿಗೆ ವಿಶೇಷ ಪೂಜೆ ಹಾಗೂ ಒಡೆಬಾಲು ನೀಡಿ ದೇವರ ದರ್ಶನ ಪಡೆದು ಪುನೀತರಾದರು. ಗ್ರಾಮದ ಭಕ್ತಾಧಿಗಳಿಗೆ ತೀರ್ಥಪ್ರಸಾದವನ್ನು ಏರ್ಪಡಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಪಕ್ಷ ಬೇದವನ್ನು ಮರೆತು ಎಲ್ಲಾ ಕುಟುಂಬದ ಸದಸ್ಯರು ಮೂರು ದಿನಗಳ ಕಾಲ ಶ್ರದ್ದಾ ಭಕ್ತಿಯಿಂದ ಪೂಜೆಯನ್ನು ನಡೆಸಿ ದೇವರ ಕೃಪೆಗೆ ಪಾತ್ರರಾದರು.