ಪಡುಕೋಣೆ:ನದಿಗೆ ಬಿದ್ದು ಪತ್ರಕರ್ತನ ಪತ್ನಿ ಮಗುವಿನ ಮತ್ತು ವಿದ್ರಾವಕ ಅಂತ್ಯ

ಮಝರ್,ಕುಂದಾಪುರ.


ಪಡುಕೋಣೆ : ಕಾಲು ಜಾರಿ ನದಿಗೆ ಉರುಳಿದ ಮಗುವನ್ನು ರಕ್ಷಿಸಲು ಹೋದ ತಾಯಿಯ ಸಹಿತ ಮಗು ಸಹ ದಾರುಣವಾಗಿ ಸಾವಿಗೀಡಾದ ಘಟನೆ ಸಮೀಪದ ಪಡುಕೋಣೆ ಬಳಿ ನಡೆದಿದೆ.
ಪತ್ರಕರ್ತ ನೋಯೆಲ್ ಪಿರೇರಾ ಚುಂಗಿಗುಡ್ಡೆ ಅವರ ಪತ್ನಿ ರೋಜಾ ರೂಯಿ ಪಿರೇರಾ(34) ಮಗು ಶಾನ್ ರಿಚರ್ಡ್ ಪಿರೇರಾ (11) ಸಾವಿಗೀಡಾಗಿರುವ ದುರ್ದೈವಿಗಳಾಗಿದ್ದಾರೆ.
ಬೆಳಿಗ್ಗೆ ವಾಕ್ ಹೋಗಿ ಬರುವಂತೆ ಮಗು ಹಠ ಮಾಡಿದ್ದರಿಂದ ಮನೆಯ ಕೂಗಳತೆಯಷ್ಟು ದೂರವಿರುವ ನದಿ ದಂಡೆಯಲ್ಲಿ ವಾಡಿಕೆಯಂತೆ ಮಗುವಿನ ಜತೆ ತಾಯಿತೆರಳಿದ್ದರು. ಅಲ್ಲಿ ದಂಡೆಯ ಮೇಲೆ ಪಾಚಿ ಕಟ್ಟಿದ್ದರಿಂದ ಆಕಸ್ಮಿಕವಾಗಿ ನದಿಗೆ ಬಿದ್ದ ಮಗುವನ್ನು ರಕ್ಷಿಸಲು ತಾಯಿಯು ಸಹ ನದಿಗೆ ಹಾರಿದ್ದಾರೆನ್ನಲಾಗಿದೆ. ಆದರೆ ನದಿಯ ಸೆಳೆತಕ್ಕೆ ಸಿಲುಕಿದ ಇಬ್ಬರೂ ಸಾವಿಗೀಡಾಗಿದ್ದಾರೆ.ತುಂಬಾ ಹೊತ್ತಾದರೂ ಪತ್ನಿಮಗು ಮರಳಿ ಬಾರದ ಹಿನ್ನಲೆಯಲ್ಲಿ ನೋಯೆಲ್ ಅವರು ಪತ್ನಿಯ ಮೊಬೈಲಿಗೆ ಸತತ ಕಾಲ್ ಮಾಡಿದರೂ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಗೊಂಡು ಆಚೀಚೆ ಹುಡುಕಾಟ ಆರಂಭಿಸಿದ್ದಾರೆ. ಈ ಸಂದರ್ಭ ಮಗುವಿನ ಚಪ್ಪಲಿ ನದಿ ದಂಡೆಯಲ್ಲಿ ಕಂಡು ಬಂದಿದೆ. ಕೂಡಲೇ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಶವ ಗೋಚರಿಸಿದ್ದು ತದನಂತರ ಹಲವು ಗಂಟೆಗಳ ಕಾಲ ಸತತ ಹುಡುಕಾಟದ ನಂತರ ರೋಜಾ ಅವರ ಶವ ಮಾರಸ್ವಾಮಿಯ ಸೇತುವೆ ಬಳಿ ಕಂಡು ಬಂದಿದೆ.
ವಿದೇಶ ದಲ್ಲಿ ಉದ್ಯೋಗದಲ್ಲಿದ್ದ ರೋಜಾ ಅವರು ಕಳೆದ ಲಾಕ್ ಡೌನ್ ಕಾರಣ ಊರಿಗೆ ಬಂದಿದ್ದು ಬರುವ ವಾರದಲ್ಲಿ ಹಿಂತೆರಳುವುದರಲ್ಲಿದ್ದರು. ವಿಪರ್ಯಾಸವೆಂದರೆ ವಿಧಿ ಲಿಖಿತವೇ ಬೇರೆಯದಾಗಿತ್ತು
.