ಇಂದು ವಿವೇಕ್‍ಇನ್ಪೋಟಕ್‍ನಲ್ಲಿ ಶಿಕ್ಷಕರ ದಿನಾಚರಣೆ; ಎಸ್ಪಿ ಉದ್ಘಾಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ:- ಶಿಕ್ಷಕರ ದಿನಾಚರಣೆಹಾಗೂ ಸಾಧಕರಿಗೆ ಸನ್ಮಾನಕಾರ್ಯಕ್ರಮವನ್ನುಸೆ.08 ರ ಬುಧವಾರ ಬೆಳಿಗ್ಗೆ 11 ಗಂಟೆಗೆ, ನಗರದ ವಿವೇಕ್‍ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿಜಿಲ್ಲಾ ಪೊಲೀಸ್‍ರಕ್ಷಣಾಧಿಕಾರಿಡಿ.ಕಿಶೋರ್ ಬಾಬು ಅವರುಉದ್ಘಾಟಿಸಲಿದ್ದಾರೆ.
ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವರೋಜ, ಕುಮಾರ್, ಜಗದೀಶ್, ಸಂತೋಷ್, ರಾಮು, ನಾಗೇಶ್‍ಹಾಗೂ ಟಿ.ಇ.ಟಿ. ಪರೀಕ್ಷೆಯಲ್ಲಿಅರ್ಹತೆ ಪಡೆದಿರುವ ಉಷಾ, ಅನಿತಾ, ಅಶ್ವಿನಿ, ಸೋನಿಯಾ, ಸಂಗೀತ, ಆಶಾ, ವನಜ ಮತ್ತುಸುನೀಲ್‍ಅವರನ್ನುಅತ್ಮೀಯವಾಗಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್‍ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ, ಉಪನ್ಯಾಸಕರಾದಧಾರವಾಡದ ಮಹಮದ್‍ಇಲಿಯಾಸ್, ಎಸ್.ಆರ್.ರಾಕೇಶ್, ಕಿರಣ್‍ಕುಮಾರ್, ಆದಿ ವಿಜಯ ಗುಪ್ತ, ಎನ್.ಯು.ಸುಜಯ್, ಬಾನುಪ್ರಕಾಶ್, ದಾಮೋದರ ಗುಪ್ತ, ಚೈತ್ರ, ರಶ್ಮಿ ಸೇರಿದಂತೆ ಸಂಸ್ಥೆಯಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು.