ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಕಛೇರಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ

JANANUDI.COM NETWORK

ಕುಂದಾಪುರ, ಅ.15: ಬೆಳಿಗ್ಗೆ ಗಂಟೆ 9.00ಕ್ಕೆ ಬ್ಲಾಕ್ ಕಾಂಗ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿ ಪ್ರಸಾದ್ ಶೆಟ್ಟಿ ಧ್ವಜಾರೋಹಣ ಕಾರ್ಯಕ್ರಮ ವನ್ನು ನೇರ ವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಕ್ಕಾಗಿ , ಬಲಿದಾನವನ್ನು ಮಾಡಿದ ಹಿರಿಯ ಹೋರಾಟಗಾರರನ್ನು ನೆನಪಿಸಿ ದೇಶದ ಸರ್ವ ಜನರಿಗೂ ಬಾಳು ಕಲ್ಪಿಸುವ ಸ್ವತಂತ್ರ್ಯದ ಆಶ್ರಯಗಳಿಗೆ ನಾವೆಲ್ಲರೂ ಬದ್ದರಾಗೋಣ ಎಂದರು.
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶ್ಯಾಮಲಾ ಭಂಡಾರಿ ಮಾತನಾಡಿ ದೇಶಕ್ಕಾಗಿ ಹೋರಾಟವನ್ನು ಮಾಡಿದ ನಾಯಕರುಗಳಿಗೆ ಆಡಳಿತ ಸರಕಾರದ ಮುಖಂಡರು ಅಗೌರವನ್ನು ಕೊಡುವುದು, ಇಂದಿನ ಯಾವ ಪೀಳಿಗೆಗೆ ತಪ್ಪು ಸಂದೇಶ ವನ್ನು ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಟ್ಯಾಕ್ಸಿ, ರಿಕ್ಷಾ, ಮೆಟಾಡೋರ್ ಡೈವರ್ಸ್ ಎಸೋಸಿಯೇನ್ ಅಧ್ಯಕ್ಷ ರಾದ ಲಕ್ಷ್ಮಣ ಶೆಟ್ಟಿ, ಗೌರವಾಧ್ಯಕ್ಷರಾದ ಬಸವಣ್ಣ, ಕಾರ್ಯದರ್ಶಿ ಉದಯ , ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಶನ್ ಶೆಟ್ಟಿ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್ , ಐಟಿ ಸೆಲ್ ಬ್ಲಾಕ್ ಅಧ್ಯಕ್ಷರಾದ ಕೆ. ಶಿವಕುಮಾರ್, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಕೇಶವ ಭಟ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಘುರಾಮ್ ನಾಯ್ಕ, ಧರ್ಮಪ್ರಕಾಶ್, ಶೋಭಾ ಸಚ್ಚಿದಾನಂದ, ಸುವರ್ಣ ಡಿ ಅಲ್ಮೇಡ, ಶಶಿರಾಜ್ ಎಮ್., ಅಶೋಕ ಸುವರ್ಣ, ಆನಂದ ಪೂಜಾರಿ, ನಿತಿನ್ ಡಿಸೋಜ, ಮಾಣಿ ಉದಯ ಕುಮಾರ್, ಎಡೊಲ್ಪ್ ಡೊಕೋಸ್ಟ, ಸುಭಾಸ್ ಪೂಜಾರಿ, ಸಂತೋಷ ಬರೆಟ್ಟೋ, ಜೋಯ್ ಡಿಕೋಸ್ಟ್, ಶಬೀರ್, ಕೆ. ಸುರೇಶ್, ಕೆ. ಸಚ್ಚಿನ್ ಕುಮಾರ್, ವಿವೇಕಾನಂದ, ವಿಠಲ ಕಾಂಚನ್, ಮಂಜುನಾಥ ಖಾರ್ವಿ, ನಾಗರಾಜ ನಾಯ್ಕ, ಸದಾನಂದ ಖಾರ್ವಿ, ಮೋಹನ್, ಗಣಪತಿ, ದಿನೇಶ್ ಬೆಟ್ಟ ಇನ್ನಿತರ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಆಶಾ ಕರ್ವಾಲೋ ವಂದಿಸಿದರು.