ಕುಂದಾಪ್ರಕನ್ನಡ ಗಲ್ಫ್ ಬಳಗದಿಂದ ಪತ್ರಕರ್ತರಿಗೆ ಫೇಸ್ ಶೀಲ್ಡ್

ವರದಿ : ಮಝರ್, ಕುಂದಾಪುರ


ಕುಂದಾಪುರ : ನಮ್ಮ   ಕುಂದಾಪ್ರಕನ್ನಡಗಲ್ಫ್  ಬಳಗ ,ದುಬಾಯಿ ಇವರ ವತಿಯಿಂದ ಉಡುಪಿ ಜಿಲ್ಲಾ ಪತ್ರಕರ್ತರಿಗೆ ಕೋವಿಡ್ 19 ರಕ್ಷಣಾತ್ಮಕ ಮುಖ ಗವಸು(ಫೇಸ್ ಶೀಲ್ಡ್ )ಗಳನ್ನು ನೀಡಲಾಯಿತು. ಗಲ್ಫ್ ಬಳಗದ ಪರವಾಗಿ ಪತ್ರಕರ್ತರಿಗೆ ಫೇಸ್ ಶೀಲ್ಡ್ ವಿತರಿಸಿದ ದುಬಾಯಿ ಉದ್ಯಮಿ ಶೀನ ದೇವಾಡಿಗ ಕೊಡಪಾಡಿ ಇವರು ಮಾತನಾಡುತ್ತಾ ” ಕೋವಿಡ್ ಮಹಾಮಾರಿಯ ಈ ಸಂದಿಗ್ಧ ಸಮಯದಲ್ಲೂ ಸುದ್ದಿಮನೆಯ ರೂವರಿಗಳಾಗಿ ತಮ್ಮ ಕರ್ತವ್ಯ ನಿಭಾಯಿಸುವ ಪತ್ರ ಕರ್ತರ ಸೇವೆ ಶ್ಲಾಘನೀಯ, ಇವರನ್ನು ಗುರುತಿಸಿ ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗದ ವತಿಯಿಂದ ಈ ಕಿರು ಕಾಣಿಕೆಯನ್ನು ಅರ್ಪಿಸುತ್ತಿದ್ದೇವೆ.ಎಂದು ಹೇಳಿದರು.

 ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ  ಸಂಘದ ಉಪಾಧ್ಯಕ್ಷ ವಿನಯಾ ಪಾಯ್ಸ್, ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ,ಉಪಾಧ್ಯಕ್ಷ ಮಝರ್,ಕಾರ್ಯದರ್ಶಿ ನಾಗರಾಜ್ ರಾಯಪ್ಪನ ಮಠ, ಉಪಕಾರ್ಯದರ್ಶಿ ರಾಘು ಬಳಕುರ್ ಉಪಸ್ಥಿತರಿದ್ದು, ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು