ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ನಿಂದ 23 ದಿನಗಳ ಕಾಲ ಕುಂದಾಪುರ ಪರಿಸರದಲ್ಲಿ ದಿನಾಲೂ ಹಸಿದವರಿಗೆ ಊಟ

JANANUDI.COM NETWORK

ಕುಂದಾಪುರ, ಜೂ. 6: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರು 11-05-2021 ರಿಂದ 01-06-2021 ಮತ್ತು 06-06-2021 ರಂದು ಹೀಗೆ ಒಟ್ಟು 23 ದಿನಗಳ ಕಾಲ ಕುಂದಾಪುರ ಪರಿಸರದಲ್ಲಿ ಸುಮಾರು 230 ಕ್ಕಿಂತಲೂ ಹೆಚ್ಚು ಹಸಿದವರಿಗೆ ಪ್ರತಿ ದಿನ ಊಟವನ್ನು ನೀಡುವ ಕಾರ್ಯಕ್ರಮ ನಡೆಸಿತು. ಇಂದು ಈ ಸೇವೆಯ ಕಾರ್ಯಕ್ರಮವನ್ನು ನಡೆಸಲು ಸಹಕರಿಸಿದವರನ್ನು ಧನ್ಯವಾದಗಳನ್ನು ಅರ್ಪಿಸಲಾಯಿತು.


ಈ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ , ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ ಖಜಾಂಚಿ ಶಿವರಾಮ ಶೆಟ್ಟಿ ಸದ್ಯಸ್ಯರಾದ ಗಣೇಶ್ ಆಚಾರ್ಯ ಡಾ. ಸೋನಿ, ನಾರಾಯಣ, ಕುಂದಾಪುರ. ಅಬ್ದುಲ್ ಬಶೀರ್ ಕೋಟ ಹಾಜರಿದ್ದರು.

ಈ 23 ದಿನಗಳ ಪ್ರಾಯೋಜಕ ರಾದ ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರು, ಪೋಷಕರು, ಉಪ ಪೋಷಕರು ಹಾಗೂ ಸದಸ್ಯರು ಗಳಿಗೆ ಮತ್ತು ಸದ್ರಿ ಕಾರ್ಯಕ್ರಮ ಆಯೋಜಿಸುವಲ್ಲಿ ನಮಗೆ ಸಹಕರಿಸಿದ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.