ಬಿ.ಜೆ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಕೋವಿಡ್ ಗೆ ಬೇಕಾಗುವ ಎಲ್ಲಾ ಬೇಕಾಗುವ ವೈದ್ಯಕೀಯ ಸಲಕರಣೆ ಸೌಲಭ್ಯ ನೀಡುತ್ತೇವೆ; ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ

ವರದಿ ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಬಿ.ಜೆ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಬೇಕಾಗುವ 1000 ಲೀ . ಆಕ್ಸಿಜನ್ ಪ್ಲಾಂಟ್ , ಆಕ್ಸಿಜನ್ ಕಾನ್ಸನ್ ಟ್ರೇಟರ್ , ಮೆಡಿಸನ್ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ನೀಡುವುದಾಗಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು . ಇಂದು ಕೆ.ಜಿ.ಎಫ್ ನ ಬಿ.ಜಿ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಯನ್ನು ವರ್ಚುವಲ್ ಪ್ಲಾಟ್‌ಫಾರಂ ಮುಖಾಂತರ ಉದ್ಘಾಟಿಸಿದ ಅವರು , ಕೋವಿಡ್ ಸಾಂಕ್ರಾಮಿಕ ರೋಗದ ಅಲೆ ಮುಗಿದ ನಂತರವೂ ಈ ಆಸ್ಪತ್ರೆ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು . ವರ್ಚುಯಲ್ ಉದ್ಘಾಟನೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ | ಅಶ್ವತ್ ನಾರಾಯಣ್ ಮತ್ತು ಆರೋಗ್ಯ ಸಚಿವರಾದ ಡಾ || ಸುಧಾಕರ್ ರವರು ಪಾಲ್ಗೊಂಡಿದ್ದರು . ಬಿ.ಜಿ.ಎಂ.ಎಲ್ . ಆಸ್ಪತ್ರೆಯಿಂದ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಕೆ.ಜಿ.ಎಫ್ ತಹಶೀಲ್ದಾರ್‌ ಸುಜಾತ , ಡಿ.ವೈ.ಎಸ್.ಪಿ ಉಮೇಶ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.