ಒಡಿಶಾ ಮು.ಮ. ನವೀನ್ ಪಟ್ನಾಯಕ್ ಲಾಕ್ ಡೌನ್ ಲ್ಲಿ ಬೀದಿ ನಾಯಿಗಳ ಉಪಚಾರಕ್ಕಾಗಿ 60 ಲಕ್ಷ ರೂ ಮಂಜೂರು

JANANNUDI.COM NETWOR

ಒಡಿಶಾ:ಈ ಸಲದ ಲಾಕ್ ಡೌನ್ನಲ್ಲಿ ಒಡಿಶಾ  ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ (ಸಿಎಮ್ಆರ್ಎಫ್)  ಬೀಡಿ ನಾಯಿಗಳಿಗಾಗಿ 60 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.

    ಒಡಿಶಾ ರಾಜ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ  ಕೋವಿಡ್ -19 ಲಾಕ್‌ಡೌನ್ ನಿಂದ ಜನರು ಮನೆಯಿಂದ ಹೊರಗೆ ಬಾರದೇ ಇರುವುದರಿಂದ ಬೀದಿ ನಾಯಿಗಳ ಉಪಚಾರಕ್ಕಾಗಿ ಈ ಹಣವನ್ನು ಮಂಜೂರು ಮಾಡಿದ್ದಾರೆ.

   ದೇಶದ ಹಲವಾರು ಭಾಗಗಳಂತೆ, ಒಡಿಶಾ ಸಹ ಕೊರೊನಾ ಪ್ರಸರಣ ಸರಪಳಿಯನ್ನು ಮುರಿಯಲು ಕ್ರಮಗಳನ್ನು ಕೈಗೊಂಡಿದೆ. ಐದು ಮೆಟ್ರೋಪಾಲಿಟನ್ ನಿಗಮಗಳು, 48 ಪುರಸಭೆಗಳು ಮತ್ತು 61 ಅಧಿಸೂಚಿತ ಪ್ರದೇಶ ಮಂಡಳಿಗಳಲ್ಲಿ (ಎನ್‌ಎಸಿ) ಇಂತಹ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಅಲ್ಲಿ ಈ ಮೊತ್ತವನ್ನು ಬಳಸಲಾಗುತ್ತದೆ.