ಕುಂದಾಪುರ; ಕೊರೋನಾ ಸಂಕಷ್ಟದಿಂದ ಬಳಲುತಿದ್ದವರಿಗೆ ಕಾಂಗ್ರೆಸ್ ಪಕ್ಷದಿಂದ ಸಹಾಯವಾಣಿ ಸಮಿತಿ ಸಿದ್ದ

JANANUDI.COM NETWORK

ಕಾಂಗ್ರೆಸ್ ಪಕ್ಷದ ಕರೆಯಂತೆ, ಉಡುಪಿ ಜಿಲ್ಲಾ ಕೇಂದ್ರವು ಕೊರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ಸಹಾಯ ಮಾಡಲು ಸಹಾಯವಾಣಿ ಸಮಿತಿ ರಚನೆ ಮಾಡಿವೆ. ಉಡುಪಿ ಜಿಲ್ಲಾ ಕೇಂದ್ರದ ಸಮಿತಿಯಲ್ಲಿ ಕುಂದಾಪುರದ ವಿಕಾಸ್ ಹೆಗ್ಡೆ, ಆಶಾಕರ್ವಾಲ್ಲೊ, ಕ್ರಷ್ಣ ಪೂಜಾರಿ ಮತ್ತು ರಮೇಶ ಶೆಟ್ಟಿವಕ್ವಾಡಿ ಇವರುಗಳು ಇದ್ದಾರೆ.


ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೋರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ನೇರವಾಗಲು “ಸಹಾಯ ವಾಣಿ” ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ಹಲವು ವಿಭಾಗಳನ್ನು ಮಾಡಲಾಗಿವೆ.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದೇವಕಿ ಸಣ್ಣಯ್ಯ, ಕೆ.ಜಿ.ನಿತ್ಯಾನಂದ, ಶ್ರೀಧರ ಶೇರಿಗಾರ್, ವಿನೋದ್ ಕ್ರಾಸ್ಟೊ, ಚಂದ್ರ ಅಮೀನ್, ಧರ್ಮಪ್ರಕಾಶ್, ಅಶೋಕ ಸುವರ್ಣ, ಸುನೀಲ್ ಪೂಜಾರಿ ಕೋಡಿ, ಕೆ.ಪಿ.ಅರುಣ್ ಪಟೇಲ್, ಜ್ಯೋತಿ ಕೆ., ಆನಂದ ಮತು ಪೂಜಾರಿ ಇದ್ದಾರೆ.
ಲಸಿಕೆ ಕೇಂದ್ರದಲ್ಲಿ ಸಹಾಯಕ್ಕಾಗಿ ಚಂದ್ರ ಶೇಖರ ಖಾರ್ವಿ, ಅಬ್ಬು ಮಹ್ಮದ್ ಚಂದ್ರ ಶೇಖರ ಶೆಟ್ಟಿ ಇದ್ದಾರೆ
ಖಾಸಗಿ ಬೆಡ್ ವ್ಯವಸ್ಥೆಗಾಗಿ ಶೋಭಾ ಸಚ್ಚಿದಾನಂದ, ಹಾಗೆ ಅಂಬ್ಯುಲೆನ್ಸ್ ವ್ಯವಸ್ಥೆಗಾಗಿ ಕುಮಾರ ಖಾರ್ವಿ ಮತ್ತು ಮುನಾಫ್ ಕೋಡಿ ಇವರುಗಳು ಸೇವೆಗೆ ಹಾಜರಿದ್ದಾರೆ.
ಇವರ ಹೆಸರು ಮತ್ತು ಫೋನ ನಂಬರ್ ಗಳನ್ನು ಇಲ್ಲಿ ಬ್ಯಾನರನಲ್ಲಿ ಕಾಣಿಸಲಾಗಿದೆ.
ಸಾರ್ವಜನಿಕರು ಇವರಿಂದಈ ಸೇವೆಯನ್ನು ಪಡೆಯಬಹುದೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಮತ್ತು ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ತಿಳಿಸಿದ್ದಾರೆ