ರೋಜರಿ ಸೊಸೈಟಿ ಬಸ್ರೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನೆ

JANANUDI.COM NETWORK


ಕುಂದಾಪುರ,ಎ.27: ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಈ ಸಂಸ್ಥೆಗೆ 8 ಶಾಖೆಗಳಿದ್ದು, ಬಸ್ರೂರಿನಲ್ಲಿ ಈ ಮೊದಲೇ ಶಾಖೆ ಇದ್ದು ಬೇರೆಡೆಯಿಂದ ವ್ಯಹರಿಸುತಿತ್ತು, ಈಗ ಈ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡು ಇಲ್ಲಿ ವ್ಯವಹರಿಸಲಿಕ್ಕಾಗಿ ಸುಸಜ್ಜಿತವಾದ ರೋಜರಿ ಕ್ರೌನ್ ಕಡ್ಡಡವನ್ನು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರು ಮಂಗಳವಾರದಂದು ಉದ್ಘಾಟಿಸಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಫಾ|ಸ್ಟ್ಯಾನಿ ತಾವ್ರೊ ‘ದೇವರು ಎಲ್ಲರಿಗೂ ತನ್ನದೇ ಆದ ಪ್ರತಿಭೆಯನ್ನು ಕೊಟ್ಟಿದ್ದಾನೆ, ಅದನ್ನು ನಾವು ಉರ್ಜಿತಗೊಳಿಸಿಕೊಳ್ಳ ಬೇಕು, ಇದನ್ನು ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸಂಸ್ಥೆ ಮಾಡಿ ತೋರಿಸಿದೆ. ಬೈಬಲಲ್ಲಿ ಹೇಳಿದ ಹಾಗೇ ಧನಿ ತಮಗೆ ನೀಡಿದ ದೆಣಿಗೆಯನ್ನು ಸುಮ್ಮನೇ ಕೂಡಿಡದೆ, ಅದನ್ನು ಮತ್ತಷ್ಟು ಹೆಚ್ಚು ಪಡೆಯಲು ಶ್ರಮ ಪಡಬೇಕು, ಅದರಂತೆ ರೋಜರಿ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗ ಶ್ರಮಿಸಿದೆ, ಹೀಗಾಗಿ ಬಹಳಷ್ಟು ಪ್ರಗತಿ ಸಾಧಿಸುತ್ತಾ, ಅವರ ಶಾಖೆಗಳಿಗೆ ಸ್ವಂತ ಕಟ್ಟಡವನ್ನು ಕಟ್ಟಲಿಕ್ಕೆ ಸಾಧ್ಯವಾಗಿದೆ, ಸಂಸ್ಥೆ ಇನ್ನಷ್ಟು ಅಭಿವ್ರದ್ದಿ ಹೊಂದಲಿ ಮತ್ತು ಸಮಾಜದ ಸೇವೆ ಮಾಡಲಿ” ಎಂದು ಶುಭ ಕೋರಿದರು. ಸ್ಥಳೀಯ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಕಟ್ಟಡಡ ಮತ್ತು ಶಾಖೆಯನ್ನು ಆಶಿರ್ವಾಚನವನ್ನು ಮಾಡಿ ಹರಿಸಿದರು.
ರೋಜರಿ ಸೊಸೈಟಿಯ ಅಧ್ಯಕ್ಷರಾದ ಜೋನ್ಸನ್ ಡಿಆಲ್ಮೇಡಾ ‘ದೂರದರ್ಶಿತ್ವ ಇಟ್ಟುಕೊಂಡು ನಮ್ಮ ಹಿರಿಯವರದಾದ ಕುಂದಾಪುರ ವಲಯ ಕಥೊಲಿಕ್ ಸಭೆಯ ಮೂಲಕ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಅಲ್ಪ ಮೊತ್ತದೊಂದಿಗೆ ಆರಂಭಗೊಂಡು, ಸಂಸ್ಥೆಯ ಆಡಳಿತ ಮಂಡಳಿಯ ಉತ್ತಮ ಆಡಳಿತದಿಂದ ಇಂದು ಈ ಸೊಸೈಟಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಸಾಲದ ಮುಗಂಡ ಹಣ ಮತ್ತು 106 ಕೋಟಿಕ್ಕಿಂತಲೂ ಹೆಚ್ಚು ಠೇವಣಿ ಹಣ ಇದೆ, ಮುಂದೆ ನಮ್ಮ ಎಲ್ಲಾ ಶಾಖೆಗಳಿಗೆ ಸ್ವಂತ ಕಟ್ಟಡ ಕಟ್ಟುವ ಯೋಚನೆ ಹಮ್ಮಿಕೊಂಡಿದ್ದೆವೆ, ಜೊತೆಗೆ ನಿರ್ದೇಶಕರ ಮತ್ತು ಸಿಬಂದಿಯ ಸಹಕಾರದೊಂದಿಗೆ ಸೊಸೈಟಿ ಇನ್ನೂ ಹೆಚ್ಚಿನ ಅಭಿವ್ರದ್ದಿ ಹೊಂದಲು ಶ್ರಮಿಸುತ್ತೆವೆ’ ಎಂದು ಸಂಸ್ಥೆಯ ಪಕ್ಷಿ ನೋಟವನ್ನು ಮುಂದಿಟ್ಟರು.
ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿಕೋಸ್ತಾ ಸ್ವಾಗತಿಸಿ, ಖಜಾನೆ ಉದ್ಘಾಟಿಸಿದರು. ಉಪಾಧ್ಯಕ್ಷ ಕಿರಣ್ ಲೋಬೊ ಗಣಕ ಯಂತ್ರ ಉದ್ಘಾಟಿಸಿದರು. ಸೊಸೈಟಿಯ ನಿರ್ದೇಶಕಿ ಶಾಂತಿ ಕರ್ವಾಲ್ಲೊ, ಸೊಸೈಟಿಯ ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ, ಕಟ್ಟಡದ ಇಂಜಿನಿಯರ್ ರವೀಂದ್ರ ಕಾವೇರಿ, ಕಾಂಟ್ರ್ಯಾಕ್ಟರ್ ಶ್ರೀಕಾಂತ್, ಕಟ್ಟಡ ಕಟ್ಟಲು ಸಹಕರಿಸಿದ ಪ್ರದೀಪ್ ಕೊತಾ, ಸಮಾಜ ಸೇವಕ ದೇವಿಡ್ ಸಿಕ್ವೇರಾ, ಮುಂತಾದ ಕೆಲವೇ ಗಣ್ಯರು ಮತ್ತು ಸಿಬ್ಬಂದಿ ಹಾಜರಿತ್ತು. ಸೊಸೈಟಿಯ ನಿರ್ದೇಶಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು.