ಕರ್ನಾಟಕ ರಾಜ್ಯ ಸರಕಾರ ಗಳಿಗೆಗೊಂದು ಮಾರ್ಗಸೂಚಿ ನೀಡುತ್ತದೆ; ಯು.ಟಿ.ಖಾದರ್ ಅಸಮಾಧಾನ

JANANUDI.COM NETWORK

ಮಂಗಳೂರು, ಎ.22: ಕರ್ನಾಟಕ ರಾಜ್ಯ ಸರಕಾರ ಕೋವಿಡ್ 19 ರ ಬಗ್ಗೆ ಗಳಿಗೆಗೊಂದು ಮಾರ್ಗಸೂಚಿ ನೀಡುವ ಮೂಲಕ ಜನತೆಗೆ ಗೊಂದಲ ಹಾಗೂ ಭಯದ ವಾತವರಣವನ್ನು ಮೂಡಿಸುತ್ತದೆ’ ಎಂದು ಮಂಗಳೂರಿನ ಶಾಸಕ ಇವತ್ತು ತೀವ್ರವಾದ ಅಸಮಾಧಾನವನ್ನು ವ್ಯಕ್ತ ಪಡಿಸಿದರು.
‘ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲವೆಂದು ಹೇಳುತ್ತಾ ಬಂದಿರುವ ಸರಕಾರ, ಇದೀಗ ಧೀಡಿರ್ ಬಂದ್ ಆದೇಶ ನೀಡುವ ಮೂಲಕ ಜನರ ಬದುಕಿನಲ್ಲಿಚೆಲ್ಲಾಟವಾಡಿಸಿ ಜನರ ತಮಾಶೆ ನೋಡುತಿದೆ’ ಎಂದು ಅವರು ಟ್ವೀಟ್ ಮೂಲಕ ಗರಂ ಆಗಿದ್ದಾರೆ.
‘ಈ ಸರ್ಕಾರದ್ದು ಹಿಂಬಾಗಿಲ ಲಾಕ್ ಡೌನ್ ಇದರ ಬದಲು ಸರಕಾರ ಸ್ಪಷ್ಟವಾದ ಆದೇಸವನ್ನು ನೀಡಿ, ಕಠಿಣವಾದ ಕ್ರಮಗಳನ್ನು ಕೈಗೊಳ್ಳ ಬೇಕು’ ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಕೆಳಗೆ ರಾಜ್ಯ ಸರಕಾರ ಇನ್ನೂ ಹಲವು ಕ್ರಮಗಳನ್ನು ಬದಲಿಸಿದವುಗಳನ್ನು ತೋರಿಸಲಾಗಿದೆ.