ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಶಿಲುಭೆ ಯಾತ್ರೆ

JANANUDI.COM NETWORK

ಕುಂದಾಪುರ,ಎ.2; ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಶುಭ ಸುಕ್ರಾವಾರದ ಪ್ರಯುಕ್ತ ಶಿಲುಭೆ ಯಾತ್ರೆನಡೆಯಿತು. ಚರ್ಚಿನ 13 ವಾಳೆಯ ಇಬ್ಬಿಬ್ಬರು ಶಿಲುಭೆ ಯಾತ್ರೆಯ ಯೇಸುವಿನ ಕಷ್ಟ ಕಾರ್ಪಣ್ಯಗಳನ್ನು ವಾಚಿಸಿ, ಪ್ರಾರ್ಥನೆ ಸಲ್ಲಿಸಿದರು.
ಕೊರೊನಾ ತೊಂದರೆಯಿಂದ ಮೈದಾನದಲ್ಲಿ ನಡೆಯಬೇಕಿದ್ದ ಶಿಲುಭೆ ಯಾತ್ರೆ ಚರ್ಚ್ ಒಳಗಡೆ ನಡೆಸಲಾಯಿತು. ಕುಂದಾಪುರ ಚರ್ಚಿನಲ್ಲಿ ಕಷ್ಟ ಕಾರ್ಪಣ್ಯದ ಧಾಮಗಳನ್ನು ವರ್ಣಮಯವಾದ ಮೂರ್ತಿಯಂದ ಆಕ್ರತಿಗಳನ್ನು ಅಳವಡಿಸಲಾಗಿದ್ದು ಅದರ ಕೆಳಗಡೆ ನಿಂತು ಶಿಲುಭೆಯಾತ್ರೆಯನ್ನು ಕೈಗೊಳ್ಳಲಾಯಿತು.
ಈ ಶಿಲುಭೆ ಯಾತ್ರೆಯ್ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ ನಡೆಯಿತು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಭಗಿನಿಯರು, ಪಾಲನ ಮಂಡಳಿಯವರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.