ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು –ಅಧ್ಯಕ್ಷೆಯಾಗಿ ಮೇಬಲ್ ಡಿಸೋಜಾ

JANANUDI.COM NETWORK

ಮೇಬಲ್ ಡಿಸೋಜಾ (ಬಸ್ರೂರು)


ಕುಂದಾಪುರ,ಮಾ.29: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಮಾ.28 ರಂದು ಜರುಗಿತು. ಮೇಬಲ್ ಡಿಸೋಜಾ (ಬಸ್ರೂರು) ಈ ಸಾಲಿನ ಅಧ್ಯಕ್ಷೆಯಾಗಿ ಮರು ಆಯ್ಕೆಗೊಂಡರು,
ನಿಕಟ ಪೂರ್ವ ಅಧ್ಯಕ್ಷರು ಹೆರಿಕ್ ಗೊನ್ಸಾಲ್ವಿಸ್ (ಗಂಗೊಳ್ಳಿ) ನಿಯೋಜಿತ ಅಧ್ಯಕ್ಷರಾಗಿ ಶಾಂತಿ ಪಿರೇರಾ ಬೈಂದೂರು, ಉಪಾಧ್ಯಕ್ಷರಾಗಿ ರೋಶನ್ ಲೋಬೊ, ಗಂಗೊಳ್ಳಿ, ಕಾರ್ಯದಶಿಯಾಗಿ ಡಯಾನಾ ಸೆರಾವೊ, ಕೊಟೇಶ್ವರ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ಮೈಕಲ್ ಪಿಂಟೊ, ಕೊಟೇಶ್ವರ, ಸಹ ಖಚಾಂಚಿಯಾಗಿ ಮೆಲ್ವಿನ್ ಡಿಮೆಲ್ಲೊ, ಪಿಯುಸ್ ನಗರ್, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೊಸ್ಪಿನ್ ರೊಡ್ರಿಗಸ್ ಬೈಂದೂರು, ರಾಜಕೀಯ ಸಂಚಾಲಕಾರಾಗಿ, ಸತೀಶ್ ರೆಬೆರೊ ತಲ್ಲೂರ್, ಸರ್ಕಾರಿ ಸವಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಕುಂದಾಪುರ, ಸ್ತ್ರೀ ಸಶಕ್ತೀಕರಣ ಸಂಚಾಲಕಿಯಾಗಿ ಡಾ|ಸೋನಿ ಡಿಕೋಸ್ತಾ, ಕುಂದಾಪುರ, ಲೆಕ್ಕ ತಪಸಣಿಕರಾಗಿ, ಪ್ರೀತನ್ ಸೋಜಾ ಬಸ್ರೂರು ಇವರುಗಳು ಆಯ್ಕೆಗೊಂಡರು. ಚುನಾವಣ ಅಧಿಕಾರಿಯಾಗಿ ಕೇಂದ್ರಿಯ ಕಾರ್ಯದರ್ಶಿಯಾದ ಸಂತೋಷ್ ಕರ್ನೆಲಿಯೊ, ಮತ್ತು ವೀಕ್ಷಕರಾಗಿ ಕೇಂದ್ರಿಯ ಲೆಕ್ಕತಪಾಣಿಕ ಎಡ್ವರ್ಡ್ ಲಾರ್ಸನ್ ಡಿಸೋಜಾ ಚುನಾವಣೆ ನಡೆಸಿಕೊಟ್ಟರು.