ಪೊಲೀಸ್ ವಾರ್ಷಿಕ ಕೀಡಾಕೂಟ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಜಯಬೇರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮಾ.16: ಪೊಲೀಸ್ ವಾರ್ಷಿಕ ಕೀಡಾಕೂಟದ ಅಂಗವಾಗಿ ನಗರದ ಕವಾಯತ್ತು ಮೈದಾನದಲ್ಲಿ ಪೊಲೀಸರ ತಂಡ ಮತ್ತು ಪತ್ರಕರ್ತರ ತಂಡಗಳ ನಡುವೆ ನಡೆದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಜಯಬೇರಿ ಬಾರಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸರ ತಂಡ ನಿಗಧಿತ 8 ಓವರಗಳಲ್ಲಿ ಕೇವಲ 49 ರನ್ ಗಳಿಸಿತ್ತು. ಸ್ಕೋರನ್ನು ಬೆನ್ನಟ್ಟಿದ ಪತ್ರಕರ್ತರ ತಂಡ ಕೇವಲ 7 ಓವರ್‍ಗಳಲ್ಲಿ ಗುರಿ ಮುಟ್ಟುವ ಮೂಲಕ ಜಯಗಳಿಸಿತು.
ಪತ್ರಕರ್ತರ ತಂಡದಲ್ಲಿ ಭಾಸ್ಕರ್, ಮಹೇಶ್, ಸಮೀರ್, ಪ್ರದೀಪ್ ರವರು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಪೊಲೀಸರ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪತ್ರಕರ್ತರ ತಂಡದ ನಾಯಕ ಎ.ಜಿ ಸುರೇಶ್‍ಕುಮಾರ್, ರವಿಕುಮಾರ್, ಎಸ್.ಕೆ ಮಂಜುನಾಥ್ ರವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಎಸ್.ಕೆ ಚಂದ್ರಶೇಖರ್, ಬಿ.ಎಸ್ ನವೀನ್‍ಕುಮಾರ್, ರಘುರಾಜ್, ಬಿ.ಎಸ್ ಗಂಗಾಧರ್, ವೇಣುಗೋಪಾಲ್, ಸಿ.ಅಮರೇಶ್ ತಂಡದಲ್ಲಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರ್ತೀಕ್‍ರೆಡ್ಡಿ ರವರು ವಿಜೇತರಾದ ಪತ್ರಕರ್ತರ ತಂಡದ ಸದಸ್ಯರಿಗೆ ಬಹುಮಾನಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ವಿಜೇತರಾದ ಪತ್ರಕರ್ತರ ತಂಡವನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್ ಗಣೇಶ್ ರವರು ಅಭಿನಂದಿಸಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಂ.ಡಿ.ಚಾಂದ್‍ಪಾಷ, ಸಿ.ಜಿ.ಮುರಳಿ, ಜಹೀರ್ ಆಲಂ, ಆಸಿಫ್‍ಪಾಷ, ಸಿ.ವಿ ನಾಗರಾಜ್, ಮಂಜುನಾಥ್, ಎನ್.ಶಿವಕುಮಾರ್, ಎ.ಎಂ.ಶಿವಕುಮಾರ್, ಚಂದ್ರು, ವಿಜಯಕುಮಾರ್, ಶ್ರೀಹರಿ, ಹನುಮಂತು ಉಪಸ್ಥಿತರಿದ್ದರು
.