ಮಹಾತ್ಮಗಾಂಧಿ ಪುಣ್ಯಸ್ಮರಣೆ -‌ ಬ್ಲಾಕ್ ಕಾಂಗ್ರೇಸ್ ಕುಂದಾಪುರ

JANANUDI.COM NETWORK


ಮಹಾತ್ಮಗಾಂಧಿ ಪುಣ್ಯ ಸ್ಮರಣೆ ಕಾರ್ಯವನ್ನು ಬ್ಲಾಕ್ ಕಾಂಗ್ರೆಸ್‌ ಕಚೇರಿ ಯಲ್ಲಿ ಬೆಳಿಗ್ಗೆ 9.00 ಘಂಟೆಗೆ ನೆರವೇರಿಸಲಾಯಿತು.

ಗಾಂಧಿ ಅಂದರೆ ಸತ್ಯ ಮತ್ತು ಅಹಿಂಸೆ. ಗೋಡ್ಸೆ ಅಂದರೆ ಅಸತ್ಯ ಮತ್ತು ಹಿಂಸೆ, ಒಳ್ಳೆಯ ವಿಚಾರಕ್ಕೆ ಕೆಟ್ಟವರ ಜೊತೆ ರಾಜಿ ಮಾಡಿಕೊಳ್ಳದಿರುವುದು ಗಾಂಧಿ ತತ್ವ ಎಂದು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು.

ಇತಿಹಾಸವನ್ನು ತಿರುಚಿ ಗಾಂಧಿ ಹೆಸರನ್ನು ಕೆಡಿಸುವ ಶಕ್ತಿಗಳ ವಿರುದ್ದ ಹೋರಾಡಬೇಕಾದರೆ, ಗಾಂಧಿ ಚಿಂತನೆಗಳನ್ನು ಪ್ರತಿಯೊಬ್ಬರೂ ಅನಿವಾರ್ಯವೆಂದು ಅಶ್ವತ್ ಕುಮಾರ್ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ನೆರವೇರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಹಮ್ಮದ್ ಅಷ್ಪಾಕ್, ಚಂದ್ರಶೇಖರ ಖಾರ್ವಿ, ಪ್ರಭಾಕರ ಕೋಡಿ, ಗಂಗಾಧರ ಶೆಟ್ಟಿ, ರಘುರಾಮ ನಾಯ್ಕ್, ದೀಪಕ್ ಕುಮಾರ್ ಶೆಟ್ಟಿ ಕಾಳಾವರ, ಶೀನ ಪೂಜಾರಿ ಕಂದಾವರ, ಅಬ್ದುಲ್ಲ ಕೋಡಿ, ಮುನಾಫ್, ಸುಬಾಷ್ ಪೂಜಾರಿ, ಅಶೋಕ್ ಸುವರ್ಣ, ಅಭಿಜಿತ್ ಪೂಜಾರಿ, ಎಡಾಲ್ಪ್ ಡಿಕೋಸ್ಟ, ವಿವೇಕಾನಂದ, ಸಚಿನ್ ಕುಮಾರ್, ವೇಣುಗೋಪಾಲ, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.