ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಸಂಘದ ಪದಾಧಿಕಾರಿಗಳು -ಅಧ್ಯಕ್ಷರಾಗಿ ಕೆ.ಶಿವಪ್ಪ ಕಾರ್ಯದರ್ಶಿಯಾಗಿ .ವಿ.ರೂಪಾವತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ವಕೀಲ ಕೆ.ಶಿವಪ್ಪ (ಅಧ್ಯಕ್ಷ) ಕೆ.ವಿ.ರೂಪಾವತಿ (ಕಾರ್ಯದರ್ಶಿ) ಚುನಾಯಿತರಾಗಿದ್ದಾರೆ.
ಕೆ.ಗಂಗಿರೆಡ್ಡಿ (ಉಪಾಧ್ಯಕ್ಷ), ಟಿ.ವಿ.ನಾರಾಯಣಸ್ವಾಮಿ (ಖಜಾಂಚಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೆ.ಶಂಕರಪ್ಪ ನಾಯಕ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಕೀಲರ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ನ್ಯಾಯಾಲಯದ ವಕೀಲರು ಅಭಿನಂದಿಸಿದರು. ಸ್ಥಳೀಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ವಕೀಲರಾದ ಅರ್ಜುನ್, ಶ್ರೀನಿವಾಸಗೌಡ, ಬಿ.ಜಿ.ಮುರಳಿ, ರಾಧಾಕೃಷ್ಣ ಇದ್ದರು.