ಪತ್ರಿಕಾ ವಿತರಕರಿಗೆ ಪತ್ರಕರ್ತರ ಭವನದಲ್ಲಿ ಜರ್ಕಿನ್‍ಗಳನ್ನು ವಿತರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಡಿ.22: ನಗರದ ಪತ್ರಿಕಾ ವಿತರಕರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್ ರವರು ಇಂದು ಪತ್ರಕರ್ತರ ಭವನದಲ್ಲಿ ಜರ್ಕಿನ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸಾಗರ್, ಸದಸ್ಯರಾದ ಶ್ರೀನಿವಾಸಶೆಟ್ಟಿ, ಶ್ರೀನಿವಾಸಮೂರ್ತಿ, ಹರೀಶ್, ರಮೇಶ್, ಮಂಜುನಾಥ್, ಲಾಯರ್ ಮಂಜುನಾಥ್ ಇನ್ನಿತರರು
ಉಪಸ್ಥಿತರಿದ್ದರು.