ಕುಂದಾಪುರದಲ್ಲಿ ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ – ಆರಂಭ

JANANUDI.COM NETWORK

ಕುಂದಾಪುರ,ಡಿ.10: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ ಉದ್ಘಾಟನಾ ಸಮಾರಂಭ ಡಿ 9 – 2020 ಬುಧವಾರ ಕಾರ್ಯಕ್ರಮ ದ ಮುಖ್ಯ ಅತಿಥಿ ಶ್ರೀ ಮುತ್ತಯ್ಯ ಶೆಟ್ಟಿ ದೀಪ ಬೆಳುಗುವುದರ ಮೂಲಕ ಕುಂದಾಪುರದಲ್ಲಿ ಆಯುರ್ ವೇದ ನ್ಯೂರೋ ಆಸ್ಪತ್ರೆ ಆರಂಭಗೊಂಡಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ರಾಗಿ ಖ್ಯಾತ ನ್ಯಾಯವಾದಿ ಶ್ರೀಯುತ ಟಿ.ಬಿ.ಶೆಟ್ಟಿ ಅವರು , ಈ ಆಸ್ಪತ್ರೆ ಮುಂದಿನ ದಿನಗಳಲ್ಲಿ ಹಿಂದಿನ ವೈಭವ ವನ್ನು ಮರಳಿ ಗಳಿಸುತದೆ ಎಂದು ವಿಶ್ವಾಸ ವಕ್ತ ಪಡಿಸಿದರು .

ಪ್ರಾಸ್ತಾವಿಕ ಮಾತುಗಳನ್ನಾಡಿದ ಆಯುಷ್ ಧಾಮ ಆಸ್ಪತ್ರೆಯ ಅಡಳಿತ ನಿರ್ದೇಶಕ ಡಾ.ಬಿ. ವಿನಯ ಚಂದ್ರ ಶೆಟ್ಟಿ ಅವರು ಅಸತ್ರೆಯ ಅಗತ್ಯತೆ , ಸೌಲಭ್ಯ – ಸೌಕರ್ಯಗಳು ,ನುರಿತ ತಜ್ಞ ವೈದ್ಯರು ಗಳ ಸೇವೆ ಹಾಗೂ ಆಯುರ್ವೇದ – ಯೋಗ – ಮರ್ಮ ಚಿಕಿತ್ಸೆ – ನ್ಯಾಚುರೋಪತಿ – ಫಿಸಿಯೋಥೆರಫಿಯ ಸಂಯೋಜನಾ ಚಿಕಿತ್ಸಾ ಪರಿಕ್ರಮದ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಡಾ.ಪ್ರತಿಭಾ ರೈ ಅವರ ಪ್ರಾರ್ಥನೆ ಯೊಂದಿಗೆ ಆರಂಭ ಗೊಂಡ ಸಭಾ ಕಾರ್ಯಕ್ರಮ ಸಂಸ್ಥೆ ಯ ಅಧ್ಯಕ್ಷರಾದ ಶ್ರೀಯುತ ಸದಾಶಿವ ಶೆಟ್ಟಿ ಯವರ ವಂದನಾರ್ಪಣೆಯೊಂದಿಗೆ ಸಂಪನ್ನ ಗೊಂಡಿತು.

ಈ ಸಂಧರ್ಭದಲ್ಲಿ 5 ದಿನಗಳ ಬ್ರಹತ್ ಉಚಿತ ಆಯುರ್ವೇದ ಶಿಬಿರಕ್ಕೆ ಚಾಲನೆ ದೊರೆಯಿತು.