ಕಾಂಗ್ರೇಸ್‍ನ ಸತ್ಯ ಹರಿಶ್ಚಂದ್ರರ ಬಗ್ಗೆ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲ್‍ಕುಮಾರ್ ಪ್ರತಿಕ್ರಿಯೆ ನೀಡಲಿ-ಶೇಷಾಪುರ ಡಾ.ಎಸ್.ಎಂ.ಗೋಪಾಲ್ ಒತ್ತಾಯ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಅ.1: ಇತ್ತೀಚೆಗೆ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿಯವರು ಹೊಸೂರಿನ ಸಾರ್ವಜನಿಕ ಸಭೆಯಲ್ಲಿ ಕಳೆದ ಎಂ.ಎಲ್.ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನಿಲ್‍ಕುಮಾರ್ ಅವರನ್ನು ಕೆ.ಹೆಚ್ ಮುನಿಯಪ್ಪನವರಿಗೆ ಮುಖಭಂಗ ಮಾಡಲು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ರವರ ಜೊತೆಗೂಡಿ ಅವರ ಮುಖಂಡತ್ವದಲ್ಲಿ ಅನಿಲ್‍ಕುಮಾರ್ ಅವರನ್ನು ಸೋಲಿಸಿ ಜೆ.ಡಿ.ಎಸ್‍ನ ಮನೋಹರ್ ರವರನ್ನು ಗೆಲ್ಲಿಸಿದೇವು ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಿ ನಾನು ಮನೋಹರ್ ಅವರಿಂದ ಹಣ ಪಡೆದಿಲ್ಲ ಎಂದು ಸತ್ಯ ಹರಿಶ್ಚಂದ್ರನ ಮಾತುಗಳನ್ನು ಆಡಿದ್ದಾರೆ.
ಇದರ ಬಗ್ಗೆ ಮಾನ್ಯ ಅನಿಲ್‍ಕುಮಾರ್ ಅವರು ಪ್ರತಿಕ್ರಯಿಸಬಹುದೆಂದು ಭಾವಿಸಿದ್ದೇವು. ಆದರೆ ಅನಿಲ್‍ಕುಮಾರ್ ಅವರ ನಾಯಕತ್ವದಲ್ಲಿ ನಾವೆಲ್ಲಾ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದೆವು. ಆದರೆ ನಾವು ನಿಷ್ಟಾವಂತ ಕಾಂಗೆಸ್ಸಿಗರು, ಪ್ರಾಮಾಣಿಕರು ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ಯಾಂಟಿನ ಒಳಗೆ ಆರ್.ಎಸ್.ಎಸ್. ಚಡ್ಡಿ ತಲೆಯ ಮೇಲೆ ಕಾಂಗ್ರೆಸ್ ಟೋಪಿ ತೊಟ್ಟು ಇಂದಿರಾಗಾಂಧಿಯ ವಂಶಸ್ಥರು ಎಂದು ಎದೆ ಬಗೆದು ಬೊಗಳೆ ಬಿಡುವ ನಾಯಕರ ಹಿಂದೆ ಅನಿಲ್‍ಕುಮಾರ್ ಅವರು ಇದ್ದಾರೆ. ಇಂತಹ ನಾಯಕರ ಸತ್ಯ ಹರಿಶ್ಚಂದ್ರರ ಮುಖವಾಡವನ್ನು ಕಳಚಿ ಇವರ ವಿಧಾನ ಪರಿಷತ್ ಚುನಾವಣೆಯಲ್ಲಿ ಇವರಿಗಾಗಿ ಕೆಲಸ ಮಾಡಿದ ಪಕ್ಷದ ಕೈ ಹಿಡಿದ ನಿಷ್ಟಾವಂತ ಕಾರ್ಯಕರ್ತರಿಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ ಎಂದು ಅನಿಲ್‍ಕುಮಾರ್ ಅವರು ಪ್ರತಿಕ್ರಯಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲಿ ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಶೇಷಾಪುರ ಡಾ.ಎಸ್.ಎಂ.ಗೋಪಾಲ್ ಒತ್ತಾಯಿಸಿದ್ದಾರೆ.