ಕುಂದಾಪುರ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್, ಕುಂದಾಪುರ( ದಕ್ಷಿಣ) ಇದರ ಸಹಯೋಗದಲ್ಲಿ ಹಣ್ಣು ಹಂಪಲು ಸಸಿ ವಿತರಣಾ ಕಾರ್ಯಕ್ರಮ‌

JANANUDI.COM NETWORK

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ರೋಟರಿ ಕ್ಲಬ್, ಕುಂದಾಪುರ( ದಕ್ಷಿಣ) ಇದರ ಸಹಯೋಗದಲ್ಲಿ ಹಣ್ಣು ಹಂಪಲು ಸಸಿ ವಿತರಣಾ ಕಾರ್ಯಕ್ರಮ‌ವನ್ನು ಆಯೋಜಿಸಲಾಯಿತು. ಕುಂದಾಪುರ ರೋಟರಿ ದಕ್ಷಿಣ ಇದರ ಅಧ್ಯಕ್ಷರಾದ ಡಾ. ಉತ್ತಮ್ ಕುಮಾರ್ ರವರು ಔಷಧೀಯ ಗಿಡಗಳ ಮಹತ್ವದ ಬಗ್ಗೆ ತಿಳಿಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ  ಶೆಟ್ಟಿಯವರಿಗೆ   ಸಾಂಕೇತಿಕವಾಗಿ  ಹಣ್ಣಿನ ಸಸಿಯನ್ನು ಹಸ್ತಾಂತರಿಸಿದರು. ಕುಂದಾಪುರ ರೋಟರಾಕ್ಟ್ ಕ್ಲಬ್ ನ(ದಕ್ಷಿಣ)  ಅಧ್ಯಕ್ಷರಾದ ಆಲ್ಡ್ರಿನ್ ಡಿಸೋಜಾ ರವರು ಸಸ್ಯ ವಿತರಣಾ ಕಾರ್ಯಕ್ರಮದ  ಔಚಿತ್ಯದ ಬಗ್ಗೆ ಪ್ರಸ್ತಾವನಾ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ರೋಟರಿ ಕ್ಲಬ್ ನ(ದಕ್ಷಿಣ)   ಸಸ್ಯವಿತರಣಾ ಯೋಜನೆಯ ಧ್ಯೇಯೋದ್ದೇಶಗಳನ್ನು ಶ್ಲಾಘಿಸಿದರು.  ರೋಟರಿ ಕ್ಲಬ್ (ದಕ್ಷಿಣ) ನ ಕಾರ್ಯದರ್ಶಿ  ಜ್ಯುಡಿತ್ ಮೆಂಡೋನ್ಸಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ಮುಖ್ಯಸ್ಥರಾದ ಶ್ರೀಮತಿ ಅರುಣಾ ಹೊಳ್ಳರವರು ಅತಿಥಿಗಳನ್ನು ಸ್ವಾಗತಿಸಿದರು. ಕಛೇರಿ ಸಿಬ್ಬಂದಿ ಶ್ರೀಮತಿ ಅಂಬಿಕಾ ಶೆಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ರವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.