ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ನೂತನ ಅಧ್ಯಕ್ಷರಾಗಿ : ಜಯಾನಂದ ಖಾರ್ವಿ

ವರದಿ : ಮಝರ್, ಕುಂದಾಪುರ

ಕುಂದಾಪುರ: ಮೂರು ಮೊಕ್ತೆಸರರ ಉಪಸ್ಥಿತಿ ಹಾಗೂ ಶ್ರೀಯುತ ಪ್ರಕಾಶ್.ಆರ್. ಖಾರ್ವಿ ಇವರ ಸಭಾಧ್ಯಕ್ಷತೆಯಲ್ಲಿ  ಶ್ರೀ ಮಹಾಕಾಳಿ ದೇವಳದ ವಾರ್ಷಿಕ ಮಹಸಭೆಯು ದೇವಸ್ಥಾನದ ವಠಾರದಲ್ಲಿ ಜರಗಿತು .ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಕೇಶವ ಖಾರ್ವಿಯವರು ವಾಚಿಸಿ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀ ರತ್ನಾಕರ ಖಾರ್ವಿಯವರು ಮಂಡಿಸಿದರು.ನಂತರ 2020-21ರಿಂದ 2021-22 ರ 2 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ಜಯಾನಂದ ಖಾರ್ವಿಯವರು ಆಯ್ಕೆಯಾಗಿ. ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಕೇಶವ ಖಾರ್ವಿ ಹಾಗೂ ಖಜಾಂಚಿಯಾಗಿ ಶ್ರೀ ರತ್ನಾಕರ ಖಾರ್ವಿಯವರು ಪುನರಾಯ್ಕೆಗೊಂಡರು . ಸಮಿತಿಯ ಸದಸ್ಯರಾಗಿ 32 ಜನರನ್ನು ಸಭೆಯು ಸೂಚಿಸಿ ಅನುಮೋದಿಸಲಾಯಿತುಕಾರ್ಯಕ್ರಮದ ಪ್ರಾರಂಭ ದಲ್ಲಿ ಶ್ರೀ ರಾಜು ನಾಯ್ಕ್ ಪ್ರಾಥಿಸಿ ಶ್ರೀ ಅಶೋಕ ಖಾರ್ವಿ ಮದ್ದುಗುಡ್ಡೆ ಇವರು ನಿರ್ವಹಿಸಿ ಕೊನೆಯಲ್ಲಿ ಶ್ರೀ ನಾಮದೇವ ಖಾರ್ವಿಯವರು ವಂದಿಸಿದರು.