ಹಸಿದವರಿಗೆ ತುತ್ತು ಅನ್ನ ನೀಡಿದಾಗ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ಸಿಗೋ ಸಂತೋಷ ಖುಷಿ ಬೇರೊಂದಿಲ್ಲಾ: ಆರ್.ಗಂಗಾದರ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ರಾಯಲ್ಪಾಡು : ಹಸಿದವರಿಗೆ ಒಂದು ತುತ್ತು ಅನ್ನ ನೀಡಿದಾಗ ಸಿಗೋ ಸಂತೋಷ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ಆಗುವ ಖುಷಿ, ಜೀವನದಲ್ಲಿ ಎಷ್ಟೇ ಇದ್ದರೂ ಯಾವುದೂ ಲೆಕ್ಕಕ್ಕೆ ಬಾರದು ಎಂದು ದಾನಿ ಆರ್.ಗಂಗಾದರ್ ಅಭಿಪ್ರಾಯಪಟ್ಟರು.
ರಾಯಲ್ಪಾಡಿನ ಕಾಲೋನಿಗಳಲ್ಲಿ ,ಯಂಡ್ರಕಾಯಿಲಕುಂಟೆ ಗ್ರಾಮದಲ್ಲಿನ 200 ಬಡಕುಟುಂಬಗಳಿಗೆ ಗಣಪತಿ ಹಬ್ಬಕ್ಕಾಗಿ ಗುರುವಾರ ಉಚಿತವಾಗಿ ಆಹಾರ ಪದಾರ್ಥಗಳನ್ನು ಹಾಗು ವಸ್ತ್ರಗಳನ್ನು ವಿತರಿಸಿ ಮಾತನಾಡಿದರ
ಕೊರೋನಾದಿಂದಾಗಿ ಬಡಕುಟುಂಬಗಳು ಅರ್ಥಿಕವಾಗಿ ಸಂಕಷ್ಟಗಳನ್ನು ಎದುರುಸುತ್ತಿರುವ ಹಿನ್ನೆಲೆಯಲ್ಲಿ ಬಡಕುಟುಂಬಗಳು ಸಹ ಹಬ್ಬಹರಿದಿನಗಳನ್ನ ಸಂಭ್ರಮದೊಂದಿಗೆ ಆಚರಿಸಿಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡರಾದ ಎಸ್.ಎನ್.ವೆಂಕಟೇಶ್, ಆರ್.ಪಾರ್ಥಸಾರಥಿ ಇದ್ದರು.