ಬೈಂದೂರು ಕೊಡೇರಿ ಸಮುದ್ರದ ಅಬ್ಬರಕ್ಕೆ ದೋಣಿ ಮಗುಚಿ ನಾಲ್ವರು ಮ್ರತ್ಯು

ಇತ್ತಿಚೀನ ಸುದ್ದಿಯಂತೆ ನಾಲ್ವರು ಮೀನುಗಾರರು ಪತ್ತೆಯಾಗಲಿಲ್ಲವೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ

ಕುಂದಾಪುರ,ಅ.16: ಸಮೂದ್ರದಲ್ಲಿ ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಸಮುದ್ರದ ಅಲೆಯ ಅಬ್ಬರಕ್ಕೆ ದೋಣಿ ಮಗುಚಿ ನಾಲ್ವರು ಮೀನುಗಾರರು ಸಾವನ್ನಪ್ಪಿದ ಕರಾಳ ಘಟನೆ ಬೈಂದೂರು ತಾಲೂಕಿನ ಕೊಡೇರಿ ಸಮಿಪ ನಡೆದಿದೆ.

  ನಾಗಶ್ರಿಯೆಂಬ ದೋಣಿಯಲ್ಲಿ ಒಟ್ಟು 12 ಮಂದಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ದೈತ್ಯ ಅಲೆಗಳ ಅಬ್ಬರದ ಹೊಡೆತಕ್ಕೆ ತುತ್ತಾಗಿ, ದೋಣಿ ಮಗುಚಿ ಬಿದ್ದು  ಮೀನುಗಾರರು ಸಮುದ್ರಕ್ಕೆ ಬಿದ್ದರೆಂದು ಹೇಳಲಾಗುತ್ತದೆ. 

    ಈ ಘಟನೆಯಿಂದ ನಾಗರಾಜ್ ಖಾರ್ವಿ,ಲಕ್ಷಣ ಖಾರ್ವಿ, ಮಂಜುನಾಥ,ಶೇಖರ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಾಲ್ವರ ಮ್ರತ ದೇಹ ಸಿಕ್ಕಿದ್ದು, ಉಳಿದವರನ್ನು ರಕ್ಷಿಸಿಸಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.