ಕುಂದಾಪುರ: ಮಾಜಿ ಶಾಸಕಿ ವಿನ್ನಿ ಫ್ರೆಡ್ ಫೆರ್ನಾಂಡೀಸ್ ಶ್ರದ್ಧಾಂಜಲಿ ಸಭೆ.

JANANUDI.COM NETWORK
ಕುಂದಾಪುರ: ಮಾಜಿ ಶಾಸಕಿ ವಿನ್ನಿ ಫ್ರೆಡ್ ಫೆರ್ನಾಂಡೀಸ್ ಶ್ರದ್ಧಾಂಜಲಿ ಸಭೆ.
ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡೀಸ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂಧರ್ಭದಲ್ಲಿ ವಿನ್ನಿ ಫ್ರೆಡ್ ಫರ್ನಾಂಡೀಸ್ ಅವರ ಪುತ್ರಿ ಖ್ಯಾತ ನ್ಯಾಯವಾದಿ ಶ್ರಿಮತಿ ಶಾಲೆಟ್ ಫರ್ನಾಂಡೀಸ್ ರೆಬೆಲ್ಲೋ,  ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಹಿರಿಯ ನ್ಯಾಯವಾದಿ ಕು. ಶ್ಯಾಮಲಾ ಭಂಡಾರಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸಿಗ ಬಿ ಹಿರಿಯಣ್ಣ, ಮಾಜಿ ಪುರಸಭಾ ಸದಸ್ಯ ಕೋಡಿ ಪ್ರಭಾಕರ್, ಅಬ್ದುಲ್ಲಾ ಕೋಡಿ ಮುಂತಾದವರು ಮೃತರ ಸಾಧನೆಗಳ ಕುರಿತು ಗುಣಗಾನ ಮಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. 
ಸಭೆಯಲ್ಲಿ  ಪುರಸಭಾ ಸದಸ್ಯರಾದ ಪಿ ದೇವಕಿ ಸಣ್ಣಯ್ಯ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಕೆಪಿಸಿಸಿ ಐ.ಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರೆಗಾರ್,    ಮಹಿಳಾ ಕಾಂಗ್ರೆಸ್‌ನ ಜ್ಯೋತಿ ಡಿ. ನಾಯ್ಕ್,  ಯುವ ಕಾಂಗ್ರೆಸ್ ಅದ್ಯಕ್ಷ  ಇಚ್ಚೀತಾರ್ಥ್ ಶೆಟ್ಟಿ, ಯುವ ಮುಖಂಡರಾದ ಕೋಡಿ ಸುನಿಲ್ ಪೂಜಾರಿ, ಸಂದೇಶ್ ಕೋಡಿ, ಅಶೋಕ್ ಸುವರ್ಣ, ಧರ್ಮಪ್ರಕಾಶ್, ಮುನಾಫ್ ಕೋಡಿ, ಹಿರಿಯ ಕಾಂಗ್ರೆಸಿಗ ಸುಭಾಶ್ ಪೂಜಾರಿ, ರಘುಪತಿ ರಾವ್ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿ ವಂದಿಸಿದರು.