ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು –ಅಧ್ಯಕ್ಷೆಯಾಗಿ ಮೇಬಲ್ ಡಿಸೋಜಾ

JANANUDI.COM NETWORK

 

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು –ಅಧ್ಯಕ್ಷೆಯಾಗಿ ಮೇಬಲ್ ಡಿಸೋಜಾ

 

ಮೇಬಲ್ ಡಿಸೋಜಾ

ಕುಂದಾಪುರ,ಮಾ.17: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ 15 -3 -20 ಭಾನುವಾರ ಜರುಗಿತು. ಮೇಬಲ್ ಡಿಸೋಜಾ (ಬಸ್ರೂರು) ಈ ಸಾಲಿನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡರು,

ಕಾರ್ಯದರ್ಶಿಯಾಗಿ ಹೆನ್ರಿ ಮೆಲ್ವಿನ್ ಪುಟಾರ್ಡೊ, ನಿಕಟ ಪೂರ್ವ ಅಧ್ಯಕ್ಷರು ಹೆರಿಕ್ ಗೊನ್ಸಾಲ್ವಿಸ್ (ಗಂಗೊಳ್ಳಿ) ನಿಯೋಜಿತ ಅಧ್ಯಕ್ಷರಾಗಿ ಶಾಂತಿ ಪಿರೇರಾ ಬೈಂದೂರು, ಉಪಾಧ್ಯಕ್ಷರಾಗಿ ವಾಲ್ಟರ್ ಡಿಸೋಜಾ, ಕುಂದಾಪುರ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ಮೈಕಲ್ ಪಿಂಟೊ, ಸಹ ಖಚಾಂಚಿಯಾಗಿ ಮೆಲ್ವಿನ್ ಡಿಮೆಲ್ಲೊ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೊಸ್ಪಿನ್ ರೊಡ್ರಿಗಸ್, ರಾಜಕೀಯ ಸಂಚಾಲಕಾರಾಗಿ, ಜಾರ್ಜ್ ಡಿಸೋಜಾ, ಸರ್ಕಾರಿ ಸವಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಸ್ತ್ರೀ ಸಶಕ್ತೀಕರಣ ಸಂಚಾಲಕಿಯಾಗಿ ಡಾ|ಸೋನಿ ಡಿಕೋಸ್ತಾ, ಲೆಕ್ಕ ತಪಸಣಿಕರಾಗಿ ಕೆಲ್ವಿನ್ ಮೆಂಡೊನ್ಸಾ ತಲ್ಲೂರು, ಇವರುಗಳು ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕೇಂದ್ರಿಯ ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ ಮತ್ತು ಕೇಂದ್ರಿಯ ಸಮಿತಿಯ ಖಚಾಂಚಿ ಜೆರಾಲ್ಡ್ ರೊಡ್ರಿಗಸ್ ನೆಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ವಲಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಆರಿಸಿ ಬಂದವರಿಗೆ ಶುಭ ಹಾರೈಸಿದರು.