ಮೂಲ ಸಾಕ್ಷರತಾ ಬೋಧಕರಿಗೆಗೌರವಧನ ವಿತರಣೆ

 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಮೂಲ ಸಾಕ್ಷರತಾ ಬೋಧಕರಿಗೆಗೌರವಧನ ವಿತರಣೆ

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬಿ.ಸಿ. ಟ್ರಸ್ಟ್ (ರಿ) ಮತ್ತುಜಿಲ್ಲಾ ಪಂಚಾಯತ್‍ನ ಮೂಲಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ 2018-19ನೇ ಸಾಲಿನ ಮೂಲ ಸಾಕ್ಷರತಾಕಾರ್ಯಕ್ರಮದ ಲಿಂಕ್‍ಡಾಕ್ಯುಮೆಂಟ್‍ ಅನುದಾನದಡಿಯಲ್ಲಿಕರ್ತವ್ಯ ನಿರ್ವಹಿಸಿದ ಬೋಧಕರುಗಳಿಗೆ ಗೌರವಧನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಜಿಲ್ಲಾ ಸಮನ್ವಯಾಧಿಕಾರಿಯಾದ ಶ್ರೀ ಶಿವಕುಮಾರ್.ಸಿ.ಕೆ. ರವರು ನೀಡಿದರು.ಈ ಕಾರ್ಯಕ್ರಮದಲ್ಲಿಮಾನ್ಯ ಯೋಜನಾಧಿಕಾರಿಗಳು ಸುರೇಶ್‍ಗೌಡಎಸ್,ಕಛೇರಿಯ ಪ್ರಬಂಧಕರಾದದತ್ತಾತ್ರೇಯಟಿ.ಕೆ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿಯಾದಈರಮ್ಮ ನಾಗರಾಳ ರವರುಉಪಸ್ಥಿತರಿದ್ದರು.