ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ವರದಿ: ಡಿ.ಬಿ. ಕ್ರಷ್ಣಮೂರ್ತಿ

ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ದಿನಾಂಕ 31-07-2019 ರಂದು ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಠಾಣಾಧಿಕಾರಿ ಶ್ರೀ ಹರೀಶ್ ನಾಯ್ಕ್ ವಹಿಸಿ ಕುಂದುಕೊರತೆಯ ಬಗ್ಗೆ ದಲಿತ ಮುಖಂಡರ ಜೊತೆ ಚರ್ಚಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕುಂದಾಪುರ ನಗರ ದಸಂಸ ಸಂಚಾಲಕರು ಹಾಗೂ ಉಪನ್ಯಾಸಕರಾದ ಶ್ರೀ ಡಿ.ಬಿ.ಕೃಷ್ಣಮೂರ್ತಿಯವರು ಮಾತನಾಡಿ, ಸಮುದಾಯದ ಯುವಕರನ್ನು ಇತರರು ದುರ್ಬಳಕೆ ಮಾಡುತ್ತಿದ್ದು, ಪೋಷಕರು ಜಾಗ್ರತೆವಹಿಸಬೇಕು ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಸಮಾಜಮುಖಿಯಾಗಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ಶ್ರೀ ಪ್ರಭಾಕರ್, ನಗರ ಮಹಿಳಾ ಘಟಕ ಸಂಚಾಲಕಿ ಶ್ರೀಮತಿ ಸೀತಾ, ಸತೀಶ್ ಜಪ್ತಿ, ಚಂದ್ರಮ ತಲ್ಲೂರು, ಗಣೇಶ್ ನಂದಿಬೆಟ್ಟು, ವಿಜಯ ಕಡ್ಗಿಮನೆ ಮತ್ತು ತಾಲ್ಲೂಕಿನ ಮುಖಂಡರು ಉಪಸ್ಥಿತರಿದ್ದರು.
ಠಾಣಾ ಸಿಬ್ಬಂದಿ ಕಾರ್ಯಕ್ರಮವನ್ನು ಆಯೋಜಿಸಿತ್ತು.