

ಕುಂದಾಪುರ, ಎ. 4: ಜಿಲ್ಲೆಯ ಅತೀ ಪುರಾತನ ಇಗರ್ಜಿಯಾದ ಕುಂದಾಪುರದ ಪಾವಿತ್ರೆ ರೋಜರಿ ಮಾತಾ ಇಗರ್ಜಿಯಲ್ಲಿ ಎ.3 ರಂದು ಶುಭ ಶುಕ್ರವಾರದ ಸಂಜೆ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
ಸಂಜೆಯ ಪ್ರಾರ್ಥನ ವಿಧಿಗಳನ್ನು ಮೂಲ್ಕಿ ಡಿವೈನ್ ಕಾಲ್ ಸೆಂಟರ್ ಪ್ರವಚಕರಾದ ಧರ್ಮಗುರು ವಂ।ಅನಿಲ್ ಕಿರಣ್ ಫೆರ್ನಾಂಡಿಸ್ ನೇರವೇರಿಸಿ “ಶಿಲುಬೆಯ ಹೊರತು, ಮುಕ್ತಿಯಿಲ್ಲ, ಯೇಸು ಕ್ರಿಸ್ತರು ಈ ಪ್ರಪಂಚದಲ್ಲಿ ಜೀವಿಸಲು ಬರಲಿಲ್ಲ, ಸಾಯಲು ಬಂದಿದ್ದರು, ನಮಗಾಗಿ ಸಾಯಲು, ಅವರ ಶಿಲುಬೆಯ ಮರಣ ಅಕಾಲಿಕವಲ್ಲಾ, ಮೊದಲೇ ನಿರ್ಧಾರ ಆಗಿತ್ತು, ನಮ್ಮ ಪೂರ್ವಜರು ಮಾಡಿದ ಪಾಪ ಶುದ್ದಿಗಾಗಿ, ದೇವಪುತ್ರನ ರಕ್ತದಿಂದು ಶುದ್ದಿಕರಿಸಿ ನಮ್ಮನ್ನು ಪಾಪ ವಿಮೋಚನೆ ಮಾಡಲು ದೇವರ ಯೋಜನೆಯಾಗಿತ್ತು. ಯೇಸುವಿನ ಗಾಯಗಳ ರಕ್ತದಿಂದ ನಾವು ನಾವು ಗುಣಮುಖರಾಗಿದ್ದೇವೆ, ಮುಕ್ತಿ ಪಡೆದಿದ್ದೇವೆ, ಯೇಸು ದೇವರ ಬಲಿ ಕುರಿಯಾಗಿದ್ದರು. ಶಿಲುಬೆ ದೇವರ ಶಕ್ತಿ, ನಮಗೆ ಕಶ್ಟಗಳು ಯಾಕೆ ಬರುತ್ತವೆ.?ಯೇಸುವಿನಿಂದ ದೂರ ಸರಿದಾಗ, ಇತರಿಂದ ನಮಗೆ ಕಶ್ಟಗಳು ಬರುತ್ತವೆ, ಪಾಪ ಕ್ರತ್ಯಗಳಿಂದ ಕಶ್ಟಗಳು ಬರುತ್ತವೆ, ಹಾಗೇ ಕಶ್ಟಗಳು ಕ್ರೈಸ್ತ ಜೀವನದ ಒಂದು ಭಾಗವಾಗಿರುತ್ತೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು, ಈ ಕಶ್ಟಗಳನ್ನು ಇದನ್ನು ಸಹಿಸಿಕೊಂಡು, ನೀತಿ ಮಾರ್ಗದಲ್ಲಿ ಜೀವಿಸಿದರೆ ನಮಗೆ ಮುಕ್ತಿ ಸಿಗುತ್ತದೆ’ ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಧರ್ಮಗುರುಗಳಾದ ಅ।ವಂ।ಧಾರ್ಮಿಕ ವಿಧಿವಿದಾನಗಳಲ್ಲಿ ಸಹಕರಿಸಿ ಧನ್ಯವಾದ ಸಮರ್ಪಿಸಿದರು. ಈ ಭಕ್ತಿಮಯ ವಿಧಿವಿದಾನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.














































































